ಚೆಕ್ ಪೋಸ್ಟ್‌ ಗೆ ಜಿಲ್ಲಾಧಿಕಾರಿ ಭೇಟಿ: ಪರೀಶೀಲನೆ

ತಾಳಿಕೋಟಿ 22: ಲೋಕಸಭೆಯ ಚುನಾವಣೆ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿಗಳಾದ ಟಿ. ಭೂಬಾಲನ್ ಅವರು ಮಿಣಜಗಿ  ಚೆಕ್ ಪೋಸ್ಟ್‌ ಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರೀಶೀಲಿಸಿದರು.  

ಶುಕ್ರವಾರ ತಾಲೂಕಿನ ಮಿಣಜಗಿ ಕ್ರಾಸ್ ನಲ್ಲಿರುವ ಚೆಕ್ಪೋಸ್ಟ್‌ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಇವರೊಂದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಚೆಕ್ ಪೋಸ್ಟ್‌ ದಲ್ಲಿಯ ಕಾರ್ಯವೈಖರಿಯನ್ನು ಪರೀಶೀಲಿಸಿ ನಿಯೋಜಿತ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.  

ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಯಾವುದೇ ರೀತಿಯ ಅಕ್ರಮ ಹಣ. ಇನ್ನಿತರ ವಸ್ತುಗಳು ಸಾಗಾಣಿಕೆ ಆಗಬಾರದೆಂದು ಹಾಗೂ ಚುನಾವಣೆಗಳು ಶಾಂತರೀತಿಯಿಂದ ನಡೆಯಲು ಚೆಕ್ ಪೋಸ್ಟ ಗಳನ್ನು ತೆರೆಯಲಾಗಿದ್ದು ಅವುಗಳನ್ನು ವ್ಯವಸ್ಥಿತವಾಗಿ ನಡೆಯುವಂತಾಗಲು ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಬೇಕು ಎಂದ ಅವರು ಚಕ್ ಪೋಸ್ಟ್‌ನ ಅಧಿಕಾರಿಗಳಿಗೆ ಕೆಲವು ಅಗತ್ಯ ಸೂಚನೆಗಳನ್ನು ನೀಡಿದರು.  

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಋಷಿಕೇಶ ಸೋನಾವಣೆ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಎಂ.ಡಿ.ಘೋರಿ, ಪಿಡಿಒ ಬಿ.ಎಂ.ಸಾಗರ, ಎಸ್‌.ಎಸ್‌.ಅಂಗಡಿ ಮತ್ತಿತರರು ಇದ್ದರು.