ಕಂಪ್ಲಿ, ಸಣಾಪುರ, ಬೆಳಗೋಡ್ಹಾಳ್ ವಿಜಯನಗರ ಕಾಲುವೆ ಹೂಳು ತೆರವು
Clearing silt from Vijayanagar canal in Kampli, Sanapur, Belgodhal
ಕಂಪ್ಲಿ 23: ಪಟ್ಟಣ ಸೇರಿದಂತೆ ತಾಲೂಕಿನ ಸಣಾಪುರ, ಬೆಳಗೋಡ್ಹಾಳ್ ಗ್ರಾಮದ ವಿಜಯನಗರ ಕಾಲುವೆಗಳಲ್ಲಿ ತುಂಬಿಕೊಂಡಿದ್ದ ಹೂಳನ್ನು ನೀರು ಬಳಕೆದಾರರ ಸಂಘದಿಂದ ತೆರವುಗೊಳಿಸಲಾಗಿತು. ನಂತರ ಸಣಾಪುರ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ದೊಡ್ಡಬಸಪ್ಪ ಮಾತನಾಡಿ, ಈಗಾಗಲೇ ಪಟ್ಟಣ, ಸಣಾಪುರ, ಬೆಳಗೋಡ್ಹಾಳ್ ಗ್ರಾಮದಲ್ಲಿ ಹಾದು ಹೋಗಿರುವ ವಿಜಯನಗರ ಕಾಲುವೆಗಳಲ್ಲಿ ಘನತ್ಯಾಜ್ಯ ತುಂಬಿಕೊಂಡ ಪರಿಣಾಮ ಹೂಳು, ಜಲಸಸ್ಯದಿಂದ ನೀರು ಸರಾಗವಾಗಿ ಹರಿಯದಂತೆ ಆಗಿದೆ. ಇದರಿಂದ ಈ ಭಾಗದ ಸಾಕಷ್ಟು ರೈತರಿಗೆ ತುಂಬ ಸಮಸ್ಯೆ ಉಂಟಾಗಿದೆ.
ರೈತರು ಬದುಕು ಹಸನಾಗಬೇಕಾದರೆ, ಸಮೃದ್ಧ ಬೆಳೆಯಿಂದ ಮಾತ್ರ. ಆದರೆ, ನೀರು ಇಲ್ಲದೇ ಇದ್ದರೆ, ಬೆಳೆ ಬೆಳೆಯುವದಾದರು ಹೇಗೆ? ಸ್ವಾಮಿ. ಅಧಿಕಾರಿಗಳು ಹೂಳೇತ್ತಲು ಮುಂದಾಗದಿರುವ ಹಿನ್ನಲೆ ಸ್ವತಹ: ರೈತರು ಸ್ವಯಂ ಪ್ರೇರಿತವಾಗಿ ನೀರು ಬಳಕೆದಾರರ ಸಂಘದಿಂದ ಕಾಲುವೆಯಲ್ಲಿನ ಹೂಳು ತೆಗೆಸಲಾಯಿತು. ಎರಡನೇ ಬೆಳೆಗೆ ನೀರು ಇಲ್ಲದ ಪರಿಣಾಮ ಈಗಾಗಲೇ ರೈತರು ಬದುಕು ಸಂಕಷ್ಟಕ್ಕೆ ಸಿಲುಕಿದೆ. ಈಗ ಮುಂಗಾರು ಆರಂಭದ ಹಿನ್ನಲೆ ಬೆಳೆ ಬೆಳೆಯಲು ನೀರಿನ ಅವಶ್ಯಕತೆ ಇದೆ. ಆದ್ದರಿಂದ ಕಾಲುವೆ ಮೂಲಕ ನೀರು ಹರಿಸಿಕೊಳ್ಳಲು ಕಾಲುವೆಯಲ್ಲಿ ಹೂಳನ್ನು ಮೊದಲು ತೆಗೆದುಕೊಳ್ಳಬೇಕಾಗಿದೆ. ಆದ್ದರಿಂದ ಸ್ವತ: ರೈತರಾದ ನಾವು ಹೂಳು ತೆಗೆಸಿಕೊಳ್ಳುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಕಂಪ್ಲಿ ನೀರು ಬಳಕೆದಾರರ ಸಹಕಾರ ಸಂಘದ ಉಪಾಧ್ಯಕ್ಷ ಟಿ.ಗಂಗಣ್ಣ, ಕಾರ್ಯದರ್ಶಿ ಅಶೋಕ, ಗೋಂದಿ ಮಂಜುನಾಥ, ರೈತರಾದ ವಿರುಪಾಕ್ಷಿ, ಬಸವರಾಜ ಸೇರಿದಂತೆ ರೈತರಿದ್ದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 