19ರಂದು ಮಹಾಲಿಂಗಪುರದಲ್ಲಿ ಚಕ್ರವರ್ತಿ ಸೂಲಿಬೆಲೆ

ಮಹಾಲಿಂಗಪುರ 17 : ಮೋದೀಜಿಯವರ 10 ವರ್ಷಗಳ ಅಭಿವೃದ್ಧಿಯೋಜನೆಗಳ ಕುರಿತ ಕಾರ್ಯಕ್ರಮವನ್ನು ಏ.19 ರ ಶುಕ್ರವಾರ ಸಾಯಂಕಾಲ 5.30 ಕ್ಕೆ ಮಹಾಲಿಂಗಪುರದ ಕೆಎಲ್‌ಇ ಕಾಲೇಜು ಎದುರುಗಡೆ ನಮೋ ಬ್ರಿಗೇಡ್ ಮಹಾಲಿಂಗಪುರ ಘಟಕದ ವತಿಯಿಂದ ಆಯೋಜಿಸಿದ್ದು, ಮುಖ್ಯಭಾಷಣಕಾರರಾಗಿ ಯು ಬ್ರಿಗೇಡ್ ಸಂಸ್ಥಾಪಕ, ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರು ಆಗಮಿಸುತ್ತಿದ್ದು, ಹುಕ್ಕೇರಿ ಕ್ಷೇತ್ರ ಕ್ಯಾರಗುಡ್ಡಮಠದ ಅಭಿನವ ಮಂಜುನಾಥ ಸ್ವಾಮೀಜಿ ಸಾನಿಧ್ಯವಹಿಸಲಿರುವರು ಎಂದು ನಮೋ ಬ್ರಿಗೇಡ್ ಮಹಾಲಿಂಗಪುರ ಘಟಕದ ಉಪಾಧ್ಯಕ್ಷ ರಾಕೇಶ ಕೆಸರಗೊಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದೀಜಿ ವಿಕಾಸದ ಹಬ್ಬವನ್ನೇ ಮಾಡಿಬಿಟ್ಟಿದ್ದಾರೆ.ಅಭಿವೃದ್ಧಿಯ ಕಲ್ಪನೆಯನ್ನು ವಿಸ್ತಾರಗೊಳಿಸಿದ್ದಾರೆ. ದೇಶವನ್ನು ಕತ್ತಲಲ್ಲೇ ಇಟ್ಟಿದ್ದ ಇಂಡಿಕೂಟದವರಿಗೆ ಇದು ಸಹಿಸಲಾರದೇ ನರೇಂದ್ರ ಮೋದೀಜಿಯವರನ್ನು ಸೋಲಿಸಲೇಬೇಕೆಂದು ಹಟಕ್ಕೆ ಬಿದ್ದಿದ್ದಾರೆ.70 ವರ್ಷಗಳ ತಪಸ್ಸಿನ ನಂತರ ಒಬ್ಬ ಮಹಾನ್ ನಾಯಕ ಸಿಕ್ಕಿದ್ದಾನೆ, ಮತ್ತೆ ಅವರನ್ನು ಗೆಲ್ಲಿಸಿ ನಮ್ಮ ಭವಿಷ್ಯ ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.