ಉಚಿತ ಕಣ್ಣಿನ ತಪಾಸಣೆ ಶಿಬಿರಕ್ಕೆ ಸಿಪಿಐ ಎಚ್‌.ಡಿ.ಮುಲ್ಲಾ ಚಾಲನೆ

ರಾಯಬಾಗ 03: ಬಡವರಿಗೆ ಉಚಿತವಾಗಿ ನೇತ್ರ ತಪಾಸಣೆ ಶಿಬಿರ ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಇಂತಹ ಕಾರ್ಯಗಳು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕೆಂದು ಸಿಪಿಐ ಎಚ್‌.ಡಿ.ಮುಲ್ಲಾ ಹೇಳಿದರು.  

ರವಿವಾರ ಪಟ್ಟಣದ ವಿದ್ಯಾನಗರದ ಇಕ್ರಾ ಉರ್ದು ಶಾಲೆಯಲ್ಲಿ ಏಕತಾ ಸೋಶಿಯಲ್ ವೇಲ್‌ಫರ್ ಫೌಂಡೇಶನ್ ಹಾಗೂ ಸಾಂಗಲಿಯ ಎಸ್‌ವಿಪಿ ಲಾಯನ್ಸ್‌ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಟ್ಟಣದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.  

ಇಕ್ರಾ ಸಂಸ್ಥೆ ಅಧ್ಯಕ್ಷ ಹಾಜಿ ಮುಲ್ಲಾ, ಪ.ಪಂ.ಮಾಜಿ ಅಧ್ಯಕ್ಷ ಸಂತೋಷ ಮೇತ್ರಿ, ಅಝರ ಮುಲ್ಲಾ, ಡಾ.ಹರುಣ ಚೌಗಲಾ, ಡಾ.ರಿಯಾಜ್ ಮುಲ್ಲಾ, ಮೌಲಾನಾ ಅರೀಫ್, ಹರೀಶ ಕುಲಗುಡೆ, ಏಕತಾ ಫೌಂಡೇಶನ್ ಅಧ್ಯಕ್ಷ ಯುನುಸ ಮುಲ್ಲಾ, ಅಬ್ದುಲ್ ಕವಡೆ, ಹಫೀಜ ಮುಬಾರಕ, ಶಫೀಉಲ್ಲಾ ಗೊಲಂದಾಜ, ಸಲ್ಮಾನ ಪಠಾಣ, ಅದಮ ಪಠಾಣ, ಹಫೀಜ ಅತ್ತಾವುಲ್ಲಾ, ಇರ್ಫಾನ ತಾಂಬೋಳೆ, ಉಬೇದ ಮುಲ್ಲಾ, ಅರ್ಬಾಜ ಜಮಾದಾರ ಸೇರಿದಂತೆ ಅನೇಕರು ಇದ್ದರು.