ಹಿರೇಹಾಳ ಚೆಕ್ ಪೋಸ್ಟ್‌ ಗೆ ಅನೀರಿಕ್ಷಿತ ಭೇಟಿ ನೀಡಿದ ಸಿಇಓ ಭರತ್ ಎಸ್‌.

ರೋಣ 20: ಲೋಕಸಭಾ ಚುನಾವಣೆ 2024ರ ಹಿನ್ನೆಲೆ ಈಗಾಗಲೆ ಜಿಲ್ಲೆ0ಾದ್ಯಂತ ಮಾದರಿ ನೀತಿ ಸಂಹಿತೆ ಜಾರಿ0ುಲ್ಲಿದೆ. ಅಕ್ರಮ ನಗದು, ಸಾಮಗ್ರಿ ತಡೆಗಾಗಿ ಜಿಲ್ಲಾ ಆಡಳಿತ ಜಿಲ್ಲಾದ್ಯಂತ 12 ಸ್ಥಳಗಳಲ್ಲಿ ಚೆಕ್ ಪೋಸ್ಟಗಳನ್ನು ತೆರೆದು ಪ್ರತಿ ದಿನ ನಿರಂತರವಾಗಿ ವಾಹನಗಳ ತಪಾಸಣೆ ಜರುಗಿಸಲಾಗುತ್ತಿದೆ. 

ಮಂಗಳವಾರ ರೋಣ ತಾಲೂಕಿನ ಹಿರೇಹಾಳ ಚೆಕ್ ಪೋಸ್ಟಗೆ ಜಿಲ್ಲಾ ಪಂಚಾ0ುತ ಮುಖ್ಯ ಕಾ0ುರ್ ನಿರ್ವಾಹಕ ಅಧಿಕಾರಿ ಭರತ್ ಎಸ್‌. ಅವರು ಅನೀರಿಕ್ಷಿತವಾಗಿ ಭೇಟಿ ನೀಡಿ ಪರೀಶೀಲಿಸಿದರು.  

ಚೆಕ್ ಪೋಸ್ಟನಲ್ಲಿ ನಡೆಸಲಾಗುವ ತಪಾಸಣೆ ಕುರಿತು ಮಾಹಿತಿ ಪಡೆದ ಅವರು, ದಾಖಲೆಗಳಿಲ್ಲದೆ ನಗದು, ಸಾಮಗ್ರಿ, ಚಿನ್ನಾಭರಣ, ಮಧ್ಯ ಹಾಗೂ ವಾಣಿಜ್ಯ ಸರಕುಗಳನ್ನು ವಾಹನ ಗಳಲ್ಲಿ ಸಾಗಾಟ ಮಾಡುವುದನ್ನು ಪರೀಶೀಲಿಸಬೇಕು. ದಾಖಲೆ ರಹಿತ ಸಾಮಗ್ರಿಗಳು, ನಗದು ದೊರೆತರೆ ನಿ0ುಮಾನುಸಾರ ಪ್ರಕರಣ ದಾಖಲಿಸುವಂತೆ ಚೆಕ್ ಪೋಸ್ಟನಲ್ಲಿ ಕಾ0ುರ್ನಿರ್ವಹಿಸುವ ಅಧಿಕಾರಿ ಸಿಬ್ಬಂದಿಗಳಿಗೆ ಸೂಚಿಸಿದರು. 

ಈ ಸಂದರ್ಭದಲ್ಲಿ ರೋಣ ತಾಲೂಕ ಪಂಚಾ0ುತ ಕಾ0ುರ್ ನಿರ್ವಾಹಕ ಅಧಿಕಾರಿ ರವಿ. ಎ.ಎನ್, ಸಹಾ0ುಕ ನಿರ್ದೇಶಕ ರಿ0ಾಜ ಖತೀಬ್, ಎಡಿಪಿಸಿ ಕಿರಣಕುಮಾರ ಸೇರಿದಂತೆ ಚೆಕ್ ಪೋಸ್ಟ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.