ಗುಳೇದಗುಡ್ಡದಲ್ಲಿ ರಕ್ತದಾನ ಶಿಬಿರ


ಗುಳೇದಗುಡ್ಡ 26: ಗುಳೇದಗುಡ್ಡ ಪಟ್ಟಣದಲ್ಲಿ ಶ್ರೀಜಗದ್ಗುರು ಗುರುಸಿದ್ದ ಪಟ್ಟದಾರ್ಯ ಶ್ರೀಗಳ ಪುಣ್ಯಾರಾಧನೆಯ ಶರಣ ಸಂಗಮ ಸಮಾರಂಭದ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಭಾನುವಾರ ನಡೆಯಿತು. ರಕ್ತಭಂಡಾರ ಜಿಲ್ಲಾಸ್ಪತ್ರೆ ಬಾಗಲಕೋಟೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಗುಳೇದಗುಡ್ಡ ಪಟ್ಟಣದ ಅನೇಕ ದವಾಖಾನೆಗಳ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. 

    ರಕ್ತದಾನ ಶಿಬಿರವನ್ನು ಬಸವರಾಜ ಶ್ರೀಗಳು, ಗುರುಬಸವ ದೇವರು ಉದ್ಘಾಟಿಸಿದರು. ಸುಮಾರು 100ಕ್ಕೂ ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಈ ರಕ್ತದಾನ ಕಾರ್ಯಕ್ರಮದಲ್ಲಿ ಭಂಡಾರಿ ಕಾಲೇಜಿನ ಎನ್‌.ಸಿ.ಸಿ.ಘಟಕದ ವಿದ್ಯಾರ್ಥಿಗಳು ಒಳಗೊಂಡು ಪಟ್ಟಣದ ಅನೇಕರು ಸ್ವಯಂಪ್ರೇರಿತರಾಗಿ ಬಂದು ರಕ್ತದಾನ ಮಾಡಿದ್ದು ವಿಶೇಷವಾಗಿತ್ತು. ಡಾ.ಚಂದ್ರಕಾಂತ ಜವಳಿ, ಡಾ.ಬಸವರಾಜ ಬಂಟನೂರ, ಡಾ.ಸಂಗಮೇಶ ಪರಗಿ, ಶಿವಕುಮಾರ ಕರನಂದಿ ಹಾಗೂ ಅನೇಕ ಶುಶ್ರೂಷಕರು ಈ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.