ಬೈಕ್ ಸ್ಕಿಡ್ ಆಗಿ ಸವಾರ ಸಾವು

ಬ.ಬಾಗೇವಾಡಿ 22 : ಆಲಮೇಲ ಕಡೆಯಿಂದ ಕಡಣಿ ಕಡೆಗೆ ಬೈಕ್ ಸವಾರನು ಅತಿ ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸುತ್ತಿರುವ ವೇಳೆ ಮೋಟಾರ್ ಸೈಕಲ್ ಸ್ಕಿಡ್ ಆಗಿ ಬಿದ್ದು ಪರಿಣಾಮದಿಂದ ಸವಾರ ಮೃತ ಪಟ್ಟಿರುವ ಘಟನೆ ಜನೇವರಿ 20 ರಂದು ನಡೆದಿದೆ. 

ಮೃತ ಬೈಕ್ ಸವಾರನು ಆಶೋಕ ತಂದೆ ತಿಮ್ಮಣ್ಣ ಗೊಲ್ಲರ(22) ಈತನು ಆಶೋಕ ಕೋಳಾರಿ ಇವರ ಜಮೀನದ ಹತ್ತಿರ ಬಿದ್ದು ತಲೆಗೆ ಬಾರಿ ಗಾಯ ಪೆಟ್ಟು ಪಡಿಸಿಕೊಂಡಿದ್ದು, ಚಿಕಿತ್ಸೆಗಾಗಿ ವಿಜಯಪೂರ ಬಿ.ಎಲ್.ಡಿ.ಇ.ಆಸ್ಪತ್ರೆಯಲ್ಲಿ ದಾಖಲಿಸಿತ್ತು. ಆದರೆ ಚಿಕಿತ್ಸೆ ಪಲಿಸದೆ ಮೃತ ಪಟ್ಟಿರುತ್ತಾನೆ. ಈ ಕುರಿತು ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.