ಸಂಕೇಶ್ವರದಲ್ಲಿ ಭಾರತರತ್ನ ಬಿ.ಆರ್‌.ಅಂಬೇಡ್ಕರ್ ಜಯಂತಿ ಆಚರಣೆ

ಸಂಕೇಶ್ವರ: ದಿ. 14 ಏಪ್ರೀಲ್ 2024 ರಂದು ಸಂವಿಧಾನ ಶಿಲ್ಪಿ ಭಾರತ ರತ್ನ ಬಾಬಾಸಾಹೇಬ ಅಂಬೇಡ್ಕರ್ ಇವರ 133 ನೇ ಜಯಂತಿ ಉತ್ಸವವನ್ನು ಆಚರಿಸಲಾಯಿತು.  ಚುನಾವಣೆಯ ಆಚಾರ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರಲಿಲ್ಲ.  ನಗರದ ಪುರಸಭೆಯ ಸದಸ್ಯರಾದ ಡಾ. ಜಯಪ್ರಕಾಶ ಕರಜಗಿ, ನಂದು ಮುಡಶಿ, ಪಿಂಟು ಕೋಳಿ, ರೋಹನ ನೇಸರಿ, ವಿನೋದ ನಾಯಿಕ, ಜಯಪ್ರಕಾಶ ಸಾವಂತ, ಸಂತೋಷ ಮುಡಶಿ, ದೀಲೀಪ ಹೊಸಮನಿ ಯುವನೇತಾರ ಸತ್ಯನಾಯಿಕ ಮೊದಲಾದವರು ಉಪಸ್ಥಿತರಿದ್ದರು,  ಅಂಬೇಡ್ಕರ್ ಅವರ ಮೂರ್ತಿಗೆ ಎಲ್ಲರೂ ಮಾಲಾರೆ​‍್ಣ ಮಾಡಿ ಗೌರವ ಸಲ್ಲಿಸಿದರು. ಈ ಕಾರ್ಯಕ್ರಮವು ಅಂಬೇಡ್ಕರ್ ಭವನದಲ್ಲಿ ಜರುಗಿತು.