ಬಳ್ಳಾರಿ: ಜಿಲ್ಲಾದ್ಯಂತ ಮಳೆ ನೆಲಕಚ್ಚಿದ ಭತ್ತದ ಬೆಳೆ
ಬಳ್ಳಾರಿ 21: ಜಿಲ್ಲಾದ್ಯಂತ ಶುಕ್ರವಾರ ತಡರಾತ್ರಿ ವರುಣ ಅಬ್ಬರಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವೆಡೆ ಮನೆ ಕುಸಿದರೆ, ಹಲವೆಡೆ ಗದ್ದೆ, ಹೊಲಗಳಿಗೆ ನೀರು ನುಗ್ಗಿ ಹಾನಿಯಾಗಿದೆ.
ರಾತ್ರಿ 12ಗಂಟೆಗೆ ಆರಂಭವಾದ ಮಳೆ ಸತತ 3-4 ಗಂಟೆ ಸುರಿಯಿತು. ಗುಡುಗು ಸಹಿತ ಮಳೆಗೆ ಕೊಪ್ಪಳ ತಾಲೂಕಿನ ಶಹಾಪುರ, ಸಿಂದೋಗಿ ಸೇರಿ ಇತರ ಗ್ರಾಮಗಳಲ್ಲಿ ಮನೆ ಕುಸಿದಿದ್ದು, ಕೆಲ ಮನೆಗಳ ಛಾವಣಿ ಕಿತ್ತು ಹೋಗಿವೆ. ಕೊಪ್ಪಳ ನಗರದ ಬೆಂಕಿನಗರ, ಹಮಾಲರ ಏರಿಯಾದಲ್ಲಿ ಚರಂಡಿ ತುಂಬಿ ರಸ್ತೆಗೆ ನೀರು ಹರಿದಿದ್ದಲ್ಲದೇ ತಗ್ಗು ಪ್ರದೇಶದ ಕೆಲ ಮನೆಗಳು ನುಗ್ಗಿ ಅವಾಂತರ ಸೃಷ್ಟಿಸಿದೆ. ಹಿಟ್ನಾಳ, ಬೇವಿನಹಳ್ಳಿ, ಲಿಂಗದಹಳ್ಳಿ ಮತ್ತು ಶಹಪುರದಲ್ಲಿ ಮನೆಗಳು ಕುಸಿದು, ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಗದ್ದೆಗೆ ನೀರು ನುಗ್ಗಿ ಬೆಲೆ ನೆಲಕಚ್ಚಿದೆ. ಶಹಪುರದ ಗಂಗಮ್ಮ ಜೋಗಿ, ತಿಪ್ಪಣ್ಣ ಕಟ್ಟಿ, ಗಂಗಮ್ಮ ಸುಣಗಾರ, ಅಂಬಮ್ಮ ಸೇರಿ ಇತರರ ಸುಮಾರು 10-12 ಮನೆಗಳಿಗೆ ಹಾನಿಯಾಗಿವೆ.
ಕೆಲವೆಡೆ ವಿದ್ಯುತ್ ತಂತಿಗಳು ತುಂಡಾಗಿದ್ದು, ಶನಿವಾರ ಮಧ್ಯಾಹ್ನದವರೆಗೂ ವಿದ್ಯುತ್ ವ್ಯತಯ ಕಂಡುಬಂತು.
ಹಿರೇಹಳ್ಳ ಸೇರಿ ಬಹುಪಾಲು ಹಳ್ಳಗಳು ತುಂಬಿದ್ದು, ಕಿನ್ನಾಳ ಬಳಿಯ ಹಿರೇಹಳ್ಳ ಜಲಾಶಯ ಭತರ್ಿಯಾಗಿ ಹೆಚ್ಚುವರಿ ನೀರನ್ನ ಎರಡು ಗೇಟ್ಗಳ ಮೂಲಕ ಹಳ್ಳಕ್ಕೆ ಬಿಡಲಾಗಿದೆ. ಈ ಭಾಗದ ರೈತರು ಹಾಗೂ ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಸಜ್ಜೆ, ಮೆಕ್ಕೆಜೋಳ ಸೇರಿ ಇತರ ಬೆಳೆಗಳು ಹಾನಿಯಾಗಿದ್ದು, ಹೊಲಗಳಲ್ಲಿ ಒಂದು ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಕೋಳೂರು ಬಳಿಯ ಬ್ರಿಡ್ಜ್ ಮುಂಭಾಗದ ತಡೆಗೋಡೆ ನೀರಿನ ರಭಸಕ್ಕೆ ಬಿರುಕುಬಿಟ್ಟಿದ್ದು, ನೀರು ಪೋಲಾಗುತ್ತಿದೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 