ಅಧ್ಯಕ್ಷರಾಗಿ ಬಸವರಾಜ ಭೀಮರಾಣಿ ಆಯ್ಕೆ


ಚನ್ನಮ್ಮನ ಕಿತ್ತೂರ 15: ಕಿತ್ತೂರ ತಾಲೂಕಿನ ರಾಣಿ ಚನ್ನಮ್ಮ ನವಭಾರತ ಸೇನೆ ತಾಲೂಕ ಅಧ್ಯಕ್ಷರನ್ನಾಗಿ ಬಸವರಾಜ ಮ. ಭೀಮರಾಣಿ ಅವರು ಆಯ್ಕೆಯಾಗಿದ್ದು, ರಾಜ್ಯಾಧ್ಯಕ್ಷ ಕನ್ನಡ ನಜೀರ್ ಅವರ ಸೂಚನೆ ಮೇರೆಗೆ ರಾಜ್ಯ ಸಂಚಾಲಕ ಜಗದೀಶ ಕಡೋಲಿ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.