ಯಲ್ಲಮ್ಮಾ ದೇವಿಯ ದರ್ಶನ ಪಡೆದ ಬಿ ಆರ್ ಛಾಯಾ
ಉಗರಗೋಳ 07: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಬುಧವಾರ ಪ್ರಖ್ಯಾತ ಹಿನ್ನೆಲೆ ಗಾಯಕಿ ಬಿ ಆರ್ ಛಾಯಾ ಕುಟುಂಬ ಸಮೇತ ರೇಣುಕಾ ಯಲ್ಲಮ್ಮಾ ದೇವಿಯ ದರ್ಶನ ಆಶೀರ್ವಾದ ಪಡೆದುಕೊಂಡರು.
ಯಲ್ಲಮ್ಮಾ ದೇವಿಯ ಸನ್ನಿಧಿಯಲ್ಲಿ ಬಿ ಆರ್ ಛಾಯಾ ಅವರು ಸುಶ್ರಾವ್ಯವಾಗಿ ರೇಣುಕಾ ಯಲ್ಲಮ್ಮ ದೇವಿಯ ಸ್ತುತಿ ಹಾಡಿ ಭಕ್ತರನ್ನು ಹರ್ಷಚಿತ್ತರನ್ನಾಗಿಸಿದರು.
ದೇವಸ್ಥಾನ ವತಿಯಿಂದ ಹಿನ್ನೆಲೆ ಗಾಯಕಿ ಬಿ ಆರ್ ಛಾಯಾ ಕುಟುಂಬವನ್ನು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್ಪಿಬಿ ಮಹೇಶ ಶಾಲೂ ಹೊದಿಸಿ ಸತ್ಕರಿಸಿದರು.
ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್ಪಿಬಿ ಮಹೇಶ, ಪದ್ಮಪಾಣಿ ಜೋಡಿದಾರ, ರಾಜಕುಮಾರ ಮಡಿವಾಳರ, ಡಿ ವ್ಹಿ ಕಂಭಾರ, ರಾಜು ಬೆಳವಡಿ, ಎಎಸ್ಆಯ್ ಎಸ್ ಆರ್ ಗಿರಿಯಾಲ, ಮಲ್ಲನಗೌಡ ಪಾಟೀಲ, ಗಣಪತಿಗೌಡ ಚನ್ನಪ್ಪಗೌಡ್ರ, ಪಂಡಿತ ಪಿ ರಾಜಶೇಖರಯ್ಯ ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.