ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಶೆಟ್ಟರ್

ಉಗರಗೋಳ 30: ಶ್ರೀಕ್ಷೇತ್ರ ರೇಣುಕಾ ಯಲ್ಲಮ್ಮನ ಗುಡ್ಡಕ್ಕೆ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಭೇಟಿ ನೀಡಿ ಶ್ರೀ ದೇವಿಯ ದರ್ಶನ ಆಶೀರ್ವಾದ ಪಡೆದುಕೊಂಡರು.  

ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಿಯಲ್ಲಿ ಗೆಲುವಿಗಾಗಿ ಪ್ರಾರ್ಥಿಸಿ, ಪೂಜೆ ಸಲ್ಲಿಸಿದರು. 

ಸಂಜಯ ಪಾಟೀಲ, ರತ್ನಾ ಆನಂದ ಮಾಮನಿ, ವಿರೂಪಾಕ್ಷ ಮಾಮನಿ, ಬಸಯ್ಯ ಹಿರೇಮಠ, ಜಗದೀಶ ಕೌಜಗೇರಿ, ಈರಣ್ಣಾ ಚಂದರಗಿ, ರಾಜು ನಿಡವಣಿ, ಸುಭಾಸ ಪಾಟೀಲ, ಮಲ್ಲಿಕಾರ್ಜುನ ಸೌಕಾರ, ನಯನಾ ಭಸ್ಮೀ ವಿರುಪಾಕ್ಷ ಹನಶಿ, ಕುಮಾರ ಜಕಾತಿ, ತಲ್ಲೂರಮಠ,  ವಾಯ್ ವಾಯ್ ಕಾಳಪ್ಪನವರ, ಈಶ್ವರ ಮೇಲಗಿರಿ, ಬಸಪ್ಪ ಶಿದ್ದಕ್ಕನವರ, ಗಿರಿಶ ಸಕಪ್ಪನವರ, ಯಲ್ಲಪ್ಪಗೌಡ ಗಂದಿಗವಾಡ ಹಾಗೂ ಅಪಾರ ಅಭಿಮಾನಿ ಬಳಗ ಇದ್ದರು.