ಅಯೋಧ್ಯಪತಿ ಶ್ರೀರಾಮಲಲ್ಲಾ ಪುಸ್ತಕ ಬಿಡುಗಡೆ

ರಾಣೇಬೆನ್ನೂರು 21:  ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶ್ರೀರಾಮನವಮಿಯ ಪ್ರಯುಕ್ತ ನಗರದ ಒರವಲಯದಲ್ಲಿರುವ ಶ್ರೀರಾಮಕೃಷ್ಣ ಪರಮಹಂಸ ಆಶ್ರಮದಲ್ಲಿ ಶ್ರೀ ಪ್ರಕಾಶಾನಂದ ಜಿ ಮಹಾರಾಜ್ ಮತ್ತು ಆತ್ಮ ದೀಪಾನಂದ ಜಿ ಮಹಾರಾಜ್ ನೇತೃತ್ವದಲ್ಲಿ  ಶ್ರೀರಾಮ ಅಯೋಧ್ಯಾಪತಿ ಶ್ರೀ ರಾಮಲಲ್ಲಾ ಭಾವಚಿತ್ರದ ಪುಸ್ತಕವನ್ನು  ಬಿಡುಗಡೆ ಮಾಡಲಾಯಿತು.  

ನಂತರ ಶ್ರೀ ಪ್ರಕಾಶಾನಂದ ಮಹಾರಾಜ್ ಮಾತನಾಡಿ, ನಗರದಲ್ಲಿ ರಾಮನ ಭಾವಚಿತ್ರವನ್ನು ಮನೆ ಮನೆಗೆ ತಲುಪಿಸುವ ಮುಖಾಂತರ ರಾಮನ ಆದರ್ಶಗಳನ್ನು ತತ್ವ ಸಿದ್ಧಾಂತಗಳನ್ನು ಯುವಕರಲ್ಲಿ ಮೈ ಗೂಡಿಸಿಕೊಂಡಾಗ ಮಾತ್ರ ಯುವಕರು ರಾಮನ ಆದರ್ಶವನ್ನು ಪಾಲಿಸಿದಂತಾಗುತ್ತದೆ ಎಂದರು.ಸಂದರ್ಭದಲ್ಲಿ ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿಯಾದ ಕಿರಣ  ಗುಳೇದ,  ತಾಲೂಕ ಕಾರ್ಯದರ್ಶಿಯಾದ ಶಂಕರ್ ಬಾರ್ಕಿ, ರೈತ ಮುಖಂಡರಾದ ಹನುಮಂತಪ್ಪ ಕಬ್ಬಾರ್, ಯುವ ಮುಖಂಡರಾದ  ಶಿವಕುಮಾರ್ ಹೊಸಳ್ಳಿ, ವಿಜಯ್ ಕುಮಾರ್ ಅರಳಿಕಟ್ಟಿ, ನವೀನ್ ಕುಮಾರ್ ಸಪಾಳಿ, ಸಂದೀಪ್ ಕೋನಬೆವು , ವೀರೇಶ್ ಅಡಿವಪ್ಪನವರ್ ಹಿರಿಯ ಮುಖಂಡರು ಭಾಗವಹಿಸಿದ್ದರು.