ಕಲಾವಿದ ಮಂಜುನಾಥಗೌಡರಿಗೆ ‘ಕಲ್ಯಾಣ ಕಲಾಸಿರಿ’ ಗೌರವ
Artist Manjunatha Gowda honored with 'Kalyana Kalasiri'
ಲೋಕದರ್ಶನ ವರದಿ
ಕಲಾವಿದ ಮಂಜುನಾಥಗೌಡರಿಗೆ ‘ಕಲ್ಯಾಣ ಕಲಾಸಿರಿ’ ಗೌರವ
ದಾರವಾಡ 03: ದಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ತ್ರಿ ವಿಧ ದಾಸೋಹಿ ಪೂಜ್ಯ ಲಿಂ. ಬಸವಣ್ಣಜ್ಜನವರ ಪುಣ್ಯಸ್ಮರಣೋತ್ಸವ ಹಾಗೂ ಕಲ್ಯಾಣಪುರ ವೈಭವ ಸಮಾರಂಭದ ಅಂಗವಾಗಿ ಹುಬ್ಬಳ್ಳಿಯ ಖ್ಯಾತ ಕಲಾವಿದ ಮಂಜುನಾಥಗೌಡ ಪಾಟೀಲರಿಗೆ ‘ಕಲ್ಯಾಣ ಕಲಾಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕುಂದಗೋಳದ ಕಲ್ಯಾಣಪುರ ಮಠದ ಬಸವಣ್ಣಜ್ಜ ಶ್ರೀಗಳು ಕಲಾವಿದ ಮಂಜುನಾಥಗೌಡರ ದೀರ್ಘಕಾಲದ ಕಲಾಸೇವೆಯನ್ನು ಮೆಚ್ಚಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲಿ ಎಂದು ಹಾರೈಸಿ ಪ್ರಶಸ್ತಿ ನೀಡಿ ಗೌರವಿಸಿದರು.
ಸಮಾರಂಭದಲ್ಲಿ ಡಾ. ಗುರುಸಿದ್ಧ ರಾಜ ಯೋಗೇಂದ್ರ ಮಹಾಸ್ವಾಮಿಗಳು (ಮೂರುಸಾವಿರ ಮಠ, ಹುಬ್ಬಳ್ಳಿ), ನವಲಿಂಗ ಮಹಾಸ್ವಾಮಿಗಳು, ಪ್ರಭುದೇವ ಜ್ಞಾನ ಕೇಂದ್ರದ ಸಂತೆ ಕಡೂರು ಶಿವಮೊಗ್ಗ, ಸರೂ್ಭಷಣ ಸ್ವಾಮಿಗಳು, ಗದಿಗೆಯ ಸ್ವಾಮಿಗಳು, ರಾಚೋಟೇಶ್ವರ ಸ್ವಾಮಿಗಳು, ಪ್ರವಚನಕಾರ ಗವಿಸಿದ್ದೇಶ್ವರ ಶಾಸ್ತ್ರಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಸಾಂಸ್ಕೃತಿಕ ವಾತಾವರಣದಲ್ಲಿ ನಡೆದ ಕಾರ್ಯಕ್ರಮವು ಭಕ್ತಿಭಾವ ಹಾಗೂ ಕಲಾರಸಿಕರ ಮೆಚ್ಚುಗೆಗೆ ಪಾತ್ರವಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 