ಬಿರುಗಾಳಿ ಮಳೆಗೆ ಬಗ್ಗಿದ ಗಿಡಗಳನ್ನು ಸಂರಕ್ಷಿಸಲು ಅರಣ್ಯ ಇಲಾಖೆಗೆ ಮನವಿ
Appeal to the Forest Department to protect trees damaged by storms
ಬಳ್ಳಾರಿ 26: ನಗರದ ಅನಂತಪುರ ರಸ್ತೆ ಬೈಪಾಸ್ನಿಂದ ವಿಆರ್ಎಲ್ ಗೋಡೌನ್ ಮೂಲಕ ಬೆಂಗಳೂರು ರಸ್ತೆಯವರೆಗೆ ಕಳೆದೊಂದು ವರ್ಷ ಹಿಂದೆ ಅರಣ್ಯ ಇಲಾಖೆ ವತಿಯಿಂದ ನೆಡಲಾಗಿದ್ದ ಹಲವು ಗಿಡಗಳು ಇತ್ತೀಚೆಗೆ ಸುರಿದ ಭಾರಿ ಬಿರುಗಾಳಿ ಮಳೆಯಿಂದ ಬಾಗಿರುವ ಘಟನೆ ಕಂಡುಬಂದಿದೆ. ಸುಮಾರು 20ರಿಂದ 30 ಗಿಡಗಳು ಬಗ್ಗಿ ಹಾನಿಗೊಳಗಾಗಿರುವುದರಿಂದ ಅವುಗಳನ್ನು ತಕ್ಷಣವೇ ನೆಟ್ಟಗೆ ನಿಲ್ಲಿಸಿ ಸಂರಕ್ಷಣೆ ಮಾಡುವಂತೆ ಸಮಾಜ ಸೇವಕ ಎಂ. ಶಂಕರ್ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಸ್ತೆ ಬದಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ನೆಡಲಾಗಿದ್ದ ಗಿಡಗಳು ಪರಿಸರ ಸಂರಕ್ಷಣೆಗೆ ಬಹಳ ಉಪಯುಕ್ತವಾಗಿದ್ದು, ಅವು ಹಾನಿಗೊಳಗಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಗಿಡಗಳಿಗೆ ಅಗತ್ಯವಾದ ಬೆಂಬಲ ಕಂಬಗಳನ್ನು ಅಳವಡಿಸಿ ಪುನಃ ಸರಿಪಡಿಸಿದರೆ ಅವು ಬದುಕುಳಿಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳ ಪರೀಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 