ಅದ್ದೂರಿ ರಾಜ್ಯೋತ್ಸವಕ್ಕೆ ಅವಕಾಶ ನೀಡುವಂತೆ ಒತ್ತಾಯ

ಚನ್ನಮ್ಮನ ಕಿತ್ತೂರ 19: ಕರ್ನಾಟಕ ರಾಜ್ಯೋತ್ಸವದಂದು ಅದ್ದೂರಿ ಮೆರವಣಿಗೆ ಅವಕಾಶ ನೀಡಬೇಕು ಎಂದು ರಾಣಿ ಚನ್ನಮ್ಮ ನವಭಾರತ ಸೇನೆ ಒತ್ತಾಯ. ಕೋವಿಡ್ ಪ್ರಕರಣಗಳು ಸಾಕಷ್ಟು ಇಳಿಕೆಯಾಗಿವೆ. ಎಲ್ಲ ಚಟುವಟಿಕೆಗಳಿಗೂ ಅವಕಾಶ ಕೊಡಲಾಗಿದೆ ಚುನಾವಣೆಗಳನ್ನೂ ನಡೆಸಲಾಗುತ್ತಿದೆ. ಆದರೆ ಕನ್ನಡಿಗರ ಹೆಮ್ಮೆಯ ರಾಜ್ಯೋತ್ಸವ ಮೆರವಣಿಗೆ ಅವಕಾಶ ನೀಡಬೇಕು. ಪ್ರತಿ ವರ್ಷ ರಾಜ್ಯೋತ್ಸವವನ್ನು ನಾಡಹಬ್ಬವಾಗಿ ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿತ್ತು ಆದರೆ, ಕೋವಿಡ್ ನಿಂದಾಗಿ ಕಳೆದ ಎರಡು ವರ್ಷಗಳಿಂದ ಸರಳವಾಗಿ ಆಚರಿಸಿಕೊಂಡು ಬರಲಾಗಿತ್ತು ಈ ವರ್ಷ ರಾಜ್ಯೋತ್ಸವವನ್ನು ಮೆರವಣಿಗೆ ಅದ್ಧೂರಿಯಾಗಿ ಆಚರಣೆ ಆಚರಿಸಲು ಅನುಮತಿ ನೀಡಬೇಕು ಇಲ್ಲಂದರೆ ಹೋರಾಟ ಮಾಡಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ರಾಣಿ ಚನ್ನಮ್ಮ ನವಭಾರತ ಸೇನೆ ರಾಜ್ಯ ಸಂಚಾಲಕರಾದ  ಜಗದೀಶ ಕಡೋಲಿ ಮನವಿ ಮಾಡಿಕೊಂಡಿದ್ದಾರೆ.