ಜೀವನಧಾರಾ ಟ್ರಸ್ಟಿನಿಂದ ಇನ್ನೊಂದು ಮಾನವೀಯ ಕಾರ್ಯ
ಲೋಕದರ್ಶನ ವರದಿ
ಹೊನ್ನಾವರ,14:.ಯಾರಿಗೂ ಬೇಡದವರಾದ ಮಾನಸಿಕ ರೋಗಿಗಳಾಗಿ ಗೊತ್ತು ಗುರಿ ಇಲ್ಲದೇ ರಾಷ್ಟ್ರೀಯ ಹೆದ್ದಾರಿಯಗಲಕ್ಕು ಅಲೆಯುತ್ತಿದ್ದ ಇಬ್ಬರನ್ನು ಜೀವನಧಾರಾ ಟ್ರಸ್ಟಿನಿಂದ ಹೊನ್ನಾವರದಿಂದ ದಾರವಾಡದಲ್ಲಿರುವ ಮಾನಸಿಕ ಆಸ್ಪತ್ರೆಗೆ ರವಾನಿಸಲಾಯಿತು.
ಕಳೆದ 8-10 ದಿನಗಳಿಂದ ಹೊನ್ನಾವರದಿಂದ ಕಾಸರಕೋಡಿನವರೆಗೆ ತಿಂಡಿ ಹಾಗೂ ಆಶ್ರಯಕ್ಕಾಗಿ ಹುಚ್ಚಾಪಟ್ಟೆ ತಿರುಗಾಡುತ್ತಿದ್ದ ಇವರನ್ನು ಸಂಘದ ಅಧ್ಯಕ್ಷರಾದ ಜೆ.ಜೆ.ಡಿಸೋಜಾ ಹಾಗೂ ಸದಸ್ಯರಾದ ಎಸ್.ಜೆ.ಕೈರನ್ನ ಹಾಗೂ ಮಹೇಶ ಕಲ್ಯಾಣಪುರ ಗುರುತಿಸಿ, ಹೊನ್ನಾವರ ಪೋಲಿಸ್ ಠಾಣಾ ಅಧಿಕಾರಗಳ ಸಹಕಾರದೊಂದಿಗೆ ಠಾಣೆಗೆ ತಂದು ನಂತರ ಸೇಂಟ್ ಇಗ್ನೇಶಿಯಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನ್ಯಾಯಾಲಯದ ಮೂಲಕ ಧಾರವಾಡ ಮಾನಸಿಕ ರೋಗಿಗಳ ಆಸ್ಪತ್ರೆಗೆ ಜೀವನಧಾರಾ ಟ್ರಿಸ್ಟಿನ ಸದಸ್ಯರಾದ ಡಾ. ರಂಗನಾಥ ಪೂಜಾರಿ ಹಾಗೂ ಮಹೇಶ ಕಲ್ಯಾಣಪುರ ಮತ್ತು ಪೋಲಿಸರಾದ ಓಮು ನಾಯ್ಕ ಹಾಗೂ ಹೋಮ್ಗಾಡರ್್ನಾದ ಶಶಿಹಿತ್ತಲ್ ರವರು ಸುರಕ್ಷಿತವಾಗಿ
ಮುಟ್ಟಿಸಿರುತ್ತಾರೆ.
ಈ ಕಾರ್ಯದಲ್ಲಿ ಹೆಚ್ಚಿನ ಮುತವಜರ್ಿ ಸಹಕರಿಸಿದ ಹೊನ್ನಾವರದ ಪಿ.ಎಸ್.ಆಯ್. ಸಂತೋಷ್ ಕಾಯ್ಕಿಣಿಯವರಿಗೆ ಹಾಗೂ ಇಗ್ನೇಷಿಯಸ್ ಆಸ್ಪತ್ರೆಯ ಸಿಬ್ಬಂದಿಗಳಿಗೆ ಜೀವನಧಾರ ಟ್ರಸ್ಟಿನ ಸರ್ವ ಸದಸ್ಯರು ವಂದನೆ ಸಲ್ಲಿಸಿರುತ್ತಾರೆ.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 