ಭೀಮಾನದಿ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ ಘೋಷಸಿ: ಬಿ ಡಿ ಪಾಟೀಲ
Announce special package for Bhima River victims: BD Patil
ಇಂಡಿ: ಮತಕ್ಷೇತ್ರ ಸುಮಾರು14 ಗ್ರಾಮಗಳಾದ ಹಿಂಗಣಿ ಬರಗುಡಿ ಪಡನೂರ ಶಿರಗೂರ ಗುಬೇವಾಡ ಅಗರಖೇಡ ಮಣ್ಣೂರ ಬುಯ್ಯಾರ ನಾಗರಳ್ಳಿ ಖೇಡಗಿ ಹಾಗೂ ರೋಡಗಿ ಪ್ರತಿಬಾರಿ ಭೀಮಾನದಿ ಪ್ರವಾಹದಿಂದ ಬೆಲೆಬಾಳುವ ಬೆಳೆ ಜಾನುವಾರು, ಜೀವಹಾನಿ ಹಾಗೂ ಮನೆಗಳು ಹಾಳಾಗುವ ಸಮಸ್ಯೆಗಳು ಇಂಡಿ ತಾಲೂಕಿನ ರೈತರಿಗೆ ಹಾಗೂ ಅಧಿಕಾರಿಗಳಿಗೆ ಹೊಸದೇನಲ್ಲ. ಪ್ರತಿಬಾರಿ ಪ್ರವಾಹದಿಂದ ತತ್ತರಿಸಿರುವ ಭೀಮಾ ತೀರದ ರೈತರಿಗೆ ಒಣ ಆಶ್ವಾಸನೆಗಳು ಕೇಳಿ ಕೇಳಿ ಸುಸ್ತಾಗಿದ್ದಾರೆ.
ಆದರೆ ಈ ಬಾರಿ ಪ್ರವಾಹ ಅತೀಯಾದ ಹಾನಿಮಾಡಿದೆ. ಕಬ್ಬು, ತೋಗರಿ, ಹತ್ತಿ, ಮೆಕ್ಕೆಜೋಳ, ಸಜ್ಜೆ, ಶೆಂಗಾ ಸೇರಿದಂತೆ ಬಿತ್ತನೆ ಮಾಡಿದ ಎಲ್ಲ ಬೆಳೆಗಳು ಅತಿಯಾದ ಮಳೆ ಹಾಗೂ ಪ್ರವಾಹದಿಂದ ಸಂಪೂರ್ಣವಾಗಿ ಹಾಳಾಗಿದ್ದು ರೈತರ ಬದುಕು ಮೂರಾಬಟ್ಟೆ ಆಗಿದೆ. ತಕ್ಷಣ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಭೀಮಾ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಹಾಗೂ ತಾಲೂಕಿನ ಬೆಳೆ ಅತಿವೃಷ್ಟಿಯಿಂದ ಉಂಟಾದ ಬೆಳೆಹಾನಿಯನ್ನು ಸರ್ವೇ ಮಾಡಿ ಸೂಕ್ತ ಪರಿಹಾರ ನೀಡಬೇಕು ಎಂದು ಜೆಡಿಎಸ್ ಮುಖಂಡ ಬಿ ಡಿ ಪಾಟೀಲರು ಆಗ್ರಹಿಸಿದ್ದಾರೆ.
ಡಾ. ರಮೇಶ ರಾಠೋಡ, ಸಂತ್ರಸ್ತರೂಂದಿಗೆ ಮಾತನಾಡಿದರು. ಮಾಜಿ ಪುರಸಭಾ ಸದಸ್ಯ ಸಿದ್ದು ಡಂಗಾ, ದುಂಡು ಬಿರಾದಾರ, ಬುಳಾಳಿ ಕೆಳಗಿನಮನಿ, ಭೀಮ ಬಿರಾದಾರ, ಶಿವಪುತ್ರ ವಾಲಿಕಾರ, ಮರೇಪ್ಪ ಗಿರಣಿವಡ್ಡರ, ಮಲಕಾರಿ ಕೆಳಗಿಮನಿ, ಬೂತಾಳಿ ಅಂಕಲಗಿ, ಸೋಮನಿಂಗ ಗಿರಣಿವಡ್ಡರ, ಸಿದ್ದಲಿಂಗ ವಾಲಿಕಾರ, ದಸಗೀರಸಾಬ ಮಲ್ಲಾ, ನಿಯಾಝ್ ಅಗರಖೇಡ, ಶಿವಾಜಿ ಪೂಜಾರಿ, ಆಕಾಶ ಕ್ಷೇತ್ರಿ ಸೇರಿದಂತೆ ನೂರಾರು ಸಂತ್ರಸ್ತರು ಉಪಸ್ಥಿತರಿದ್ದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 