ಬಸ್ ಹರಿದು ಕಾಲು ತುಂಡಾದ ವೃದ್ಧೆ
ರಾಣಿಬೆನ್ನೂರ 22: ಬೆಣ್ಣೆ ಮಾರಿ ಜೀವನ ಸಾಗಿಸ್ತಿದ್ದ ಬಡಪಾಯಿ ವೃದ್ಧೆಯ ಮೇಲೆ ಬಸ್ ಹರಿದು ಕಾಲು ತುಂಡಾದ ಘಟನೆ ನಗರದ ಬಸ್ ನಿಲ್ದಾಣದಲ್ಲಿ ಗುರುವಾರ ನಡೆದಿದೆ.
ತಾಲೂಕಿನ ಮದೆನೂರು ಗ್ರಾಮದ 65 ವರ್ಷದ ಶಾಂತಮ್ಮ ಭರಮಪ್ಪ ಮಾಳನಾಯಕನಹಳ್ಳಿ ಎಂದು ಗುರುತಿಸಲಾಗಿದೆ. ಸ್ಥಳೀಯರು ಅಜ್ಜಿ ಸ್ಥಿತಿಕಂಡು ನಗರದ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.