ಹೊಳಗುಂದಿ ಯಲ್ಲಿ ಅಂಬೇಡ್ಕರ್ ಜಯಂತಿ
Ambedkar Jayanti in Holgundi
ಹೂವಿನಹಡಗಲಿ 19: ತಾಲ್ಲೂಕಿನ ಹೊಳಗುಂದಿ ಗ್ರಾಮದಲ್ಲಿ ಜೈ ಭೀಮ್ ಯೂತ್ಸ್ ಕ್ಲಬ್ ನಿಂದ ಶನಿವಾರ ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಂ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮಹಿಳೆಯರು ಕಳಸ ತಮಟೆ,ಡೊಳ್ಳು ನೊಂದಿಗೆ ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಂ ಭಾವ ಚಿತ್ರ ಮೆರವಣಿಗೆ ಯಲ್ಲಿ ಸಿಪಿಐ ಮಲ್ಲಪ್ಪ ಹೂಗಾರ, ಪಿಎಸ್ಐ ಮಣಿಕಂಠ, ಪಂಚಾಯ್ತಿ ಪಿಡಿಒ ಮರಮೇಶಪ್ಪ ಭಾವಚಿತ್ರಕ್ಕೆ ಪುಷ್ಪಾ ರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಇದೇ ವೇಳೆ ಚಿತ್ರಕಲಾ ಶಿಕ್ಷಕ ದ್ವಾರಕೀಶ್ ರೆಡ್ಡಿ, ಶಿಕ್ಷಕ ಕೊಟ್ರೇಶ ಮಾತನಾಡಿ ಸಂವಿಧಾನದ ಶಿಲ್ಪಿ ಯಾಗಿದ್ದ ಅಂಬೇಡ್ಕರ್ ಅವರು ಜಾತಿ ಪದ್ದತಿ ಮತ್ತು ಅಸ್ಪೃಶ್ಯತೆ ವಿರುದ್ದ ಹೋರಾಡಿ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ಒದಗಿಸಿಕೊಟ್ಟ ಮಹಾನ್ ನಾಯಕರಾಗಿದ್ದರು ಎಂದರು.
ನವೀನ ಕೃಷ್ಣಾ ಪ್ರಾಸ್ತಾವಿಕ ನಂತರ ದ್ವಾರಕೀಶ್ ಕ್ರಾಂತಿ ಗೀತೆಗಳನ್ನು ಹಾಡಿದರು, ಎ ಲಕ್ಷ್ಮಣ ನಿರ್ವಹಿಸಿದರು , ಎಸ್ ಬಿ ಗುರುಬಸವರಾಜ ಸ್ವಾಗತಿಸಿದರು, ಸಿ ಗುರುರಾಜ ವಂದಿಸಿದರು, ಜೈ ಭೀಮ್ ಯೂತ್ ಕ್ಲಬ್ ಅಧ್ಯಕ್ಷ ಎ ವಿಶ್ವನಾಥ,ರೈತ ಸಂಘದ ಎಂ.ಶಿವರಾಜ, ಗ್ರಾ.ಪಂ ಮಾಜಿ ಅಧ್ಯಕ್ಷ ಎ ದಡಾರ್ಪ,ಯಮುನಪ್ಪ, ದಲಿತ ಸೇನೆಯ ಸಿ ದುರುಗೇಶ್,ಬುಳ್ಳಪ್ಪ, ಎಂ ರಾಜಪ್ಪ,ಕೆ ಅಜ್ಜಪ್ಪ, ಎಂ ಸ್ವಾಮಿ, ಶಿವಕುಮಾರ,ಅಜ್ಜಯ್ಯ, ದೇವರಾಜ, ಎಂ ದುರುಗೇಶ, ಎಂ ಲೋಕೇಶ್,ಸಿ ಸಿದ್ದಲಿಂಗಸ್ವಾಮಿ,ಟಿ ಹನುಮಂತಪ್ಪ,ಶಾಂತಪ್ಪ, ರಾಜನಗೌಡ ಪಾಟೀಲ್,ಮಂಜುನಾಥ,ಮಹಾಂತೇಶ,ಗ ಣೇಶ,ಅಜಯ್,ನಿಂಗರಾಜ,ಪರಶುರಾ ಮ, ಹರ್ಷ, ಆದಿ, ಸಂತೋಷ, ಇತರರು ಇದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 