ಸುಗಮ ಸಂಗೀತ ಕಾರ್ಯಕ್ರಮ ಯಶಸ್ವಿ

ಕೊಟ್ಟೂರು 12: ವಿಜಯನಗರ  ಜಿಲ್ಲೆ ಕೊಟ್ಟೂರು ತಾಲೂಕು ಬಸ್ ನಿಲ್ದಾಣದ ಹತ್ತಿರದ ನಾಗರಾಜ ದೇವಸ್ಥಾನದಲ್ಲಿ ಬಳ್ಳಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರ್ವ ಸುಖಿ ಸೇವಾ ಟ್ರಸ್ಟ್‌ ಕೊಟ್ಟೂರು ಹಾಗೂ ಜಿಎಸ್ ರಾಜಶೇಖರ್ ಇವರ ಸಹಯೋಗದಲ್ಲಿ  ಬುಧವಾರದಂದು ಸುಗಮ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು.ಮುಖ್ಯ ಅತಿಥಿಗಳಾಗಿ ಕೋಡಿಹಳ್ಳಿ ರೇವಣ್ಣ ಭಾಗವಹಿಸಿದ್ದರು. ಇದೇ ವೇಳೆ ಮಾತನಾಡಿದ ಕಾರ್ಯದರ್ಶಿ ನಾಗರಾಜ್ ನಮ್ಮ ಮನಸ್ಸಿನಲ್ಲಿ ಅಡಗಿರುವ ಗೊಂದಲ ಹಾಗೂ ದುಗುಡ ಮನಸ್ಥಿತಿಯನ್ನು ಸುಗಮ ಸಂಗೀತ ಆಲಿಸುವುದರ ಮೂಲಕ ನಿವಾರಿಸಿಕೊಳ್ಳಬಹುದು ಎಂದು ಕಾರ್ಯಕ್ರಮದಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಹಂಸದನಿರಾಗ, ದುರ್ಗರಾಗ, ಸೋಹನಿ ರಾಗ ದಲ್ಲಿ ಹಾಡಿ ಜನರನ್ನು ರಂಜಿಸಲಾಯಿತು. ಇದೆ ವೇಳೆ ಕಾರ್ಯಕ್ರಮದಲ್ಲಿ ಹಾರ್ಮೋನಿಯಂ ಸಾತಿ ಜಂಬೂರ್ ಕುಮಾರಸ್ವಾಮಿ, ತಬಲ ಸಾತಿ ಕೆ ಪಂಪಣ್ಣ , ನಟರಾಜ ಬಜನಾ ಸಂಘದ ಅಧ್ಯಕ್ಷರಾದ ಅರಮನೆ ಮಹೇಶ್  ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾಭಾರತಿ ಶಾಲೆಯ ಮುಖ್ಯೋಪಾಧ್ಯಾಯರಾದ ಹನಸಿ ಚಿರಂಜೀವಿ ನಡೆಸಿಕೊಟ್ಟರು.