ರಂಗಭೂಮಿ ಸೇವೆಗೆ ಅಪಾರ ಕೊಡುಗೆ : ಬಿ.ಸಿದ್ದಪ್ಪ ಅಭಿಮತ

ರಂಗಭೂಮಿ ಸೇವೆಗೆ ಅಪಾರ ಕೊಡುಗೆ : ಬಿ.ಸಿದ್ದಪ್ಪ ಅಭಿಮತ A huge contribution to theatre service: B. Siddappa's opinion

ಲೋಕದರ್ಶನ ವರದಿ

ಕಂಪ್ಲಿ 20:  ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿರುವ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ವಸತಿ ನಿಲಯದ ಆವರಣದಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್‌ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಶನಿವಾರ ಜರುಗಿದವು.  ಕಲಾವಿದ ಬಿ.ಸಿದ್ದಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಂಗಭೂಮಿ ನಿರಂತರವಾಗಿ ಕಾರ್ಯಗತಗೊಳಿಸಲು ಮತ್ತು ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ಕಲೆಗಳನ್ನು ಬೆಳೆಸುವಲ್ಲಿ ಹೇಮೇಶ್ವರರವರ ಪಾತ್ರ ಅತಿ ಮುಖ್ಯವಾಗಿದೆ. ಯಾವಾಗಲೂ ಗ್ರಾಮೀಣ ಭಾಗದ ಜನಪದ, ತತ್ವಪದಗಳು, ಭಾವಗೀತೆಗಳು, ಲಾವಣಿ ಪದಗಳು, ಬಯಲಾಟ, ನಾಟಕ, ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಯೋಗದಿಂದ ರೋಗ ಮುಕ್ತಿ ಎಲ್ಲರೂ ಪ್ರತಿದಿನ ಯೋಗ, ಧ್ಯಾನ ಕೈಗೊಳ್ಳಬೇಕು. ಅಂದಾಗ ಮಾತ್ರ ಸಮೃದ್ಧ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು.