ಸೈದಾಪುರದಲ್ಲಿ ಅಮೋಘಸಿದ್ದನ ಅದ್ಧೂರಿ ಜಾತ್ರೆ
ಲೋಕದರ್ಶನವರದಿ
ಮಹಾಲಿಂಗಪುರ 18: ಸಮೀಪದ ಸೈದಾಪುರ ಗ್ರಾಮದ ಹೊರವಲಯದಲ್ಲಿ ಮುಧೋಳ-ನಿಪ್ಪಾಣಿ ಹೆದ್ದಾರಿ ಪಕ್ಕದಲ್ಲಿ ಭಾನುವಾರ ಅಮೋಘಸಿದ್ಧನ ಜಾತ್ರೆ ಅದ್ಧೂರಿಯಾಗಿ ಜರುಗಿತು. ಬೆಳಗ್ಗೆ 5 ಗಂಟೆಗೆ ಹೋಮ ಪೂಜೆಯೊಂದಿಗೆ ರುದ್ರಾಭಿಷೇಕ ಜರುಗಿತು. ಶಿವಲಿಂಗೇಶ್ವರ, ಮಾರುತೇಶ್ವರ ಮತ್ತು ಯಲ್ಲಮ್ಮ ದೇವಿ ಪಲ್ಲಕ್ಕಿಗಳು ನಂದಿಕೋಲು, ಕರಡಿಮೇಳ ಹಾಗೂ ಡೊಳ್ಳಿನ ವಾಲಗದೊಂದಿಗೆ ಅಮೋಘಸಿದ್ಧನ ಗದ್ದುಗೆಗೆ ಆಗಮಿಸಿದವು.
ಮಧ್ಯಾಹ್ನ 3 ಗಂಟೆಗೆ ಪವಾಡ ಪುರುಷರ ಧರ್ಮಭೇಟಿ ಕಾರ್ಯಕ್ರಮ ಜರುಗಿತು. ನಾಗರಾಳದ ಗುರು ಸೋಮಲಿಂಗೇಶ್ವರ, ಅಮೋಘಸಿದ್ದೇಶ್ವರ, ನಿಪನಾಳ ಮತ್ತು ಹಾರೂಗೇರಿ ಅರಣ್ಯಸಿದ್ದೇಶ್ವರ ಪಲ್ಲಕ್ಕಿಗಳು ಆಗಮಿಸಿದ್ದವು. ವಾಲಗ ಘರ್ಜನೆ ಪ್ರದರ್ಶನದ ನಂತರ ಮಹಾಪ್ರಸಾದ ಜರುಗಿತು. ಸಂಜೆಯವರೆಗೆ ಎಂಟು ಊರುಗಳ ಪಲ್ಲಕ್ಕಿಗಳನ್ನು ಹೊತ್ತ ಭಕ್ತರು ಪೈಪೋಟಿ ಮೇರೆಗೆ ಗದ್ದೆಯಲ್ಲಿ ಗದ್ದುಗೆಯ ಸುತ್ತ ಕುಣಿದಾಡಿ, ಓಡಾಡಿ ಭಕ್ತಿಯ ಮತ್ತು ಶಕ್ತಿಯ ಮೇಲಾಟ ಪ್ರದಶರ್ಿಸಿದರು.
ಡೊಳ್ಳು ಬಡಿತ, ಪಲ್ಲಕ್ಕಿಗಳ ಕುಣಿತ ಹಾಗೂ ಭಂಡಾರದ ಎಸೆತವನ್ನು ಸಾವಿರಾರು ಭಕ್ತರು ಸುತ್ತಲೂ ನಿಂತು ನೋಡಿ ಕಣ್ತುಂಬಿಕೊಂಡರು. ರಾತ್ರಿ ಡೊಳ್ಳಿನ ಪದಗಳ ಕಾರ್ಯಕ್ರಮ ಮುಂದುವರೆಯಿತು. ನ.18 ರಂದು ಬೆಳಗ್ಗೆ ಮಹಾ ಮಂಗಳಾರತಿಯೊಂದಿಗೆ ಭಂಡಾರ ಒಡೆದು ತೂರಾಡುವ ಮೂಲಕ ಜಾತ್ರೆ ಸಮಾರೋಪಗೊಂಡಿತು.
ಸೈದಾಪುರ ಅಮೋಘಸಿದ್ದೇಶ್ವರ ಜಾತ್ರಾ ಕಮಿಟಿಯಲ್ಲಿ ಪಾಟೀಲ ಮನೆತನದ ರಾಮನಗೌಡ, ಕಲ್ಲನಗೌಡ, ಶಿವನಗೌಡ, ಭೀಮನಗೌಡ, ರಂಗನಗೌಡ, ಮಲಗೌಡ, ಗೌಡಪ್ಪ ಹಾಗೂ ಶಿವಲಿಂಗಪ್ಪ ಮುಗಳಖೋಡ, ಮಹಾಲಿಂಗಪ್ಪ ಸನದಿ, ರಮೇಶ ಚಿಂಚಲಿ, ಶಿವಪ್ಪ ಬನಟ್ಟಿ, ಚೇತನ ಹಾದಿಮನಿ, ಸಿದ್ದಪ್ಪ ಹೊಸವಾಲಿಕಾರ, ಮಲಕಾರಿ ಬೆಳಗಲಿ ಸೇರಿದಂತೆ ಹಲವರು ಇದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 