ಸಹಕಾರ ಸಚಿವಾಲಯದ 5ನೇ ಸಂಸ್ಥಾಪನಾ ದಿನ: ಅಮಿತ್ ಶಾ ಹಲವು ಮಹತ್ವದ ಸಹಕಾರಿ ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆ
5th Foundation Day of the Ministry of Cooperation: Amit Shah launches and lays foundation stones for
ನವದೆಹಲಿ, ಜುಲೈ 5: ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಸೋಮವಾರ ನವದೆಹಲಿಯ ಭಾರತ್ ಮಂಡಪಂನಲ್ಲಿ ನಡೆಯಲಿರುವ ಸಹಕಾರ ಸಚಿವಾಲಯದ 5ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಲಿದ್ದು, ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಸಂಬಂಧಿಸಿದ ಹಲವು ಮಹತ್ವದ ಯೋಜನೆಗಳಿಗೆ ಚಾಲನೆ ನೀಡಲಿದ್ದು ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಈ ಕಾರ್ಯಕ್ರಮವು ಪ್ರಧಾನಿ ನರೇಂದ್ರ ಮೋದಿ ಅವರ "ಸಹಕಾರ್ ಸೇ ಸಮೃದ್ಧಿ" ಪರಿಕಲ್ಪನೆಗೆ ಅನುಗುಣವಾಗಿ ನಡೆಯುತ್ತಿದ್ದು, ಕಳೆದ ಐದು ವರ್ಷಗಳಲ್ಲಿ
ಸಹಕಾರಿ ಕ್ಷೇತ್ರದಲ್ಲಿ ಪಾರದರ್ಶಕತೆ, ತಂತ್ರಜ್ಞಾನ ಅಳವಡಿಕೆ, ಸಂಸ್ಥೆಗಳ ಬಲವರ್ಧನೆ ಮತ್ತು ತಳಮಟ್ಟದ ಸಬಲೀಕರಣಕ್ಕಾಗಿ ಕೈಗೊಂಡಿರುವ ಮಹತ್ವದ ಸುಧಾರಣೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಸಹಕಾರ ಸಚಿವಾಲಯ
ತಿಳಿಸಿದೆ.
ಕಾರ್ಯಕ್ರಮದಲ್ಲಿ ಅಮಿತ್ ಶಾ ಅವರು 135 ಧಾನ್ಯ
ಗೋದಾಮುಗಳನ್ನು ಹಸ್ತಾಂತರಿಸಲಿದ್ದು, 85 ಹೊಸ ಗೋದಾಮುಗಳನ್ನು ಉದ್ಘಾಟಿಸಲಿದ್ದಾರೆ.
ಜೊತೆಗೆ 47 ಹೊಸ ಧಾನ್ಯ ಸಂಗ್ರಹಣಾ
ಗೋದಾಮುಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಅಮೂಲ್ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಮಹಾಮಂಡಳಿ (NCCF) ಜಂಟಿಯಾಗಿ ಕೈಗೊಂಡಿರುವ ಸಹಕಾರ ವನ ಯೋಜನೆಗೆ ಭೂಮಿಪೂಜೆ ನೆರವೇರಿಸುವುದರ ಜೊತೆಗೆ, ಭಾರತೀಯ ಬೀಜ ಸಹಕಾರಿ ಸಮಿತಿ
ಲಿಮಿಟೆಡ್ (BBSSL) ವತಿಯಿಂದ ಉತ್ತರ ಪ್ರದೇಶದ ಬರಾಬಂಕಿ ಹಾಗೂ ಮಹಾರಾಷ್ಟ್ರದ ಜಲಗಾಂವ್ನಲ್ಲಿ ಸ್ಥಾಪಿಸಲಾದ ಟಿಷ್ಯೂ ಕಲ್ಚರ್ ಘಟಕಗಳನ್ನು ಉದ್ಘಾಟಿಸಲಿದ್ದಾರೆ.
ಡಿಜಿಟಲ್ ಕ್ಷೇತ್ರದ ಪ್ರಮುಖ ಯೋಜನೆಗಳಾದ NCD 3.0,
ಜಿಯೋ-ಟ್ಯಾಗ್ ಮೊಬೈಲ್ ಅಪ್ಲಿಕೇಶನ್ ಹಾಗೂ ರಾಷ್ಟ್ರೀಯ ಹೈನುಗಾರಿಕೆ
ಅಭಿವೃದ್ಧಿ ಮಂಡಳಿ (NDDB)ಯ ಮಿಲ್ಕ್ ಸಪ್ಲೈ ರಿವ್ಯೂ ಡ್ಯಾಶ್ಬೋರ್ಡ್ ಪೋರ್ಟಲ್ ಅನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ Cooperative
Inputs and Services Delivery Multi-State Limited ಮೂಲಕ ಹೈನುಗಾರಿಕೆ ಪಶುಗಳ
ಉತ್ಪಾದಕತೆ ಹೆಚ್ಚಿಸುವ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಈ ಸಂದರ್ಭದಲ್ಲಿ Cooperative
Milk Producers Organisation Multi-State Limited ಹಾಗೂ Gomay
Cooperative Society Multi-State Limited ಅನ್ನು
ಉದ್ಘಾಟಿಸಲಾಗುವುದು. ಅಲ್ಲದೆ, ರಾಷ್ಟ್ರೀಯ ನಗರ ಸಹಕಾರಿ ಹಣಕಾಸು
ಮತ್ತು ಅಭಿವೃದ್ಧಿ ನಿಗಮದ (NUCFDC) ಎರಡು ಪ್ರಮುಖ ಡಿಜಿಟಲ್
ಉಪಕ್ರಮಗಳಾದ ಸಹಕಾರ CBS (ಕೇಂದ್ರೀಕೃತ ಕೋರ್ ಬ್ಯಾಂಕಿಂಗ್ ವೇದಿಕೆ)
ಹಾಗೂ ಸಹಕಾರ ಸಹಯೋಗಿ (ನಗರ ಸಹಕಾರಿ ಬ್ಯಾಂಕ್ಗಳಿಗೆ ಸಂವಾದಾತ್ಮಕ ಕೃತಕ ಬುದ್ಧಿಮತ್ತೆ ಆಧಾರಿತ
ವೇದಿಕೆ)ಯನ್ನು ಅನಾವರಣಗೊಳಿಸಲಿದ್ದಾರೆ.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ 50,000 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ
ಸಂಘಗಳನ್ನು (PACS) ಇ-ಪ್ಯಾಕ್ಸ್ (e-PACS) ಆಗಿ ಪರಿವರ್ತಿಸಲಾಗುತ್ತಿದ್ದು, ಇದು ತಳಮಟ್ಟದ
ಸಹಕಾರಿ ಸಂಸ್ಥೆಗಳ ಡಿಜಿಟಲ್ ಸಬಲೀಕರಣದಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಇದೇ ಸಂದರ್ಭದಲ್ಲಿ ಭಾರತೀಯ ಬೀಜ ಸಹಕಾರಿ ಸಮಿತಿ
ಲಿಮಿಟೆಡ್ (BBSSL) ಹಾಗೂ ಭಾರತೀಯ ಕೃಷಿ
ಸಂಶೋಧನಾ ಮಂಡಳಿ (ICAR) ನಡುವೆ ದೇಶದ ಬೀಜ ವ್ಯವಸ್ಥೆಯನ್ನು
ಮತ್ತಷ್ಟು ಬಲಪಡಿಸುವ ಉದ್ದೇಶದ ಒಪ್ಪಂದಕ್ಕೆ (MoU) ಸಹಿ ಹಾಕಲಾಗುವುದು.
ಕಾರ್ಯಕ್ರಮದಲ್ಲಿ ಅಮಿತ್ ಶಾ ಅವರು ಹೈನುಗಾರಿಕೆ
ಸಹಕಾರಿ ಸಂಘಗಳ ಮಾದರಿ ಉಪನಿಯಮಗಳನ್ನು ಬಿಡುಗಡೆ ಮಾಡಲಿದ್ದು, ಕಳೆದ ಐದು ವರ್ಷಗಳಲ್ಲಿ
ಸಹಕಾರ ಸಚಿವಾಲಯ ಸಾಧಿಸಿರುವ ಪ್ರಮುಖ ಸಾಧನೆಗಳನ್ನು ಒಳಗೊಂಡ ಸ್ಮರಣ ಗ್ರಂಥವನ್ನೂ ಅನಾವರಣಗೊಳಿಸಲಿದ್ದಾರೆ.
ರೈತರು, ಮಹಿಳೆಯರು, ಯುವಜನರು, ಹೈನುಗಾರರು, ನಗರ ಹಾಗೂ ಗ್ರಾಮೀಣ
ಸಹಕಾರಿ ಸಂಸ್ಥೆಗಳನ್ನು ಒಳಗೊಂಡ ಸಮಗ್ರ, ತಂತ್ರಜ್ಞಾನ ಆಧಾರಿತ ಸಹಕಾರಿ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ "ಸಹಕಾರ್ ಸೇ ಸಮೃದ್ಧಿ" ಮತ್ತು ಆತ್ಮನಿರ್ಭರ, ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸುವ ಬದ್ಧತೆಯನ್ನು ಈ ಕಾರ್ಯಕ್ರಮ ಮತ್ತೊಮ್ಮೆ
ಪುನರುಚ್ಚರಿಸಲಿದೆ ಎಂದು ಸಚಿವಾಲಯ ತಿಳಿಸಿದೆ.
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ 