ಕಡಬಿ ತೋಟದ ಮನೆಗೆ ಬೆಂಕಿ: ಅಪಾರ ಹಾನಿ
ಕಡಬಿ 07: ಸಮೀಪದಲ್ಲಿರುವ ತೋಟದಲ್ಲಿನ ಸೋಮಲಿಂಗ ಪುಂಡಲೀಕ ಮಾಳಕ್ಕನವರ ಮನೆಗೆ ರವಿವಾರ ದಿ.7ರಂದು ಬೆಂಕಿ ಬಿದ್ದು ಸುಟ್ಟು ಬೂದಿಯಾಗಿದೆ.
ಘಟನೆ: ಮುಂಜಾನೆ ಮನೆಯ ಪಕ್ಕದಲ್ಲಿರುವ ತಿಪ್ಪೆ ಗುಂಡಿಯಲ್ಲಿ ಒಲೆಯ ಬೂದಿಯನ್ನು ತಂದು ಹಾಕಿದ್ದರು. ಅದರಲ್ಲಿನ ಬೆಂಕಿ ಮನೆಗೆ ತಗುಲಿ ಸುಟ್ಟು ಹೋಗಿದೆ ಮನೆಯಲ್ಲಿನ ರೈತರು ಉಪಯೋಗಿಸುವ ಗಳೆಯ ಸಾಮಗ್ರಿಗಳು, ದವಸ ದಾನ್ಯಗಳು, ಬಾಳೆ ಹಣ್ಣು ಮಾರಿದ 50ಸಾವಿರ ಹಣ, ಗೃಹ ಬಳಕೆ ಸಾಮಾನುಗಳು, ಒಂದು ಬೈಕ್ ಸಂಪೂರ್ಣ ಸುಟ್ಟು ಹಾನಿಯಾಗಿದೆ ಎಂದು ಬಾಲವ್ವ ಪುಂಡಲೀಕ ಮಾಳಕ್ಕನವರ ತಿಳಿಸಿದರು.
ಮನೆಗೆ ಬೆಂಕಿ ಬಿದ್ದ ಕೂಡಲೆ ಅಕ್ಕಪಕ್ಕ ಯಾರು ಇರಲಿಲ್ಲ. ಹಾದಿಯಲ್ಲಿ ಸಂಚೆರಿಸುವವರು ನೋಡಿದಾಗ ಮನೆಗೆ ಬೆಂಕಿ ಹತ್ತಿದ್ದನ್ನು ಕಂಡು ಹೊಲದಲ್ಲಿ ಇದ್ದ ಸಾರ್ವಜನಿಕರು ಬೆಂಕಿ ನುಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಬೆಂಕಿ ಆರದೆ ಹೋದ ಕಾರಣ ತಕ್ಷಣ ಗೋಕಾಕ ಅಗ್ನಿ ಶ್ಯಾಮಕ ಸಿಬ್ಬಂದಿಗೆ ಕರೆ ಮಾಡಿದ ಕೂಡಲೆ ಬಂದು ಬೆಂಕಿ ನಂದಿಸಿದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 