ಕಡಬಿ ತೋಟದ ಮನೆಗೆ ಬೆಂಕಿ: ಅಪಾರ ಹಾನಿ
ಕಡಬಿ 07: ಸಮೀಪದಲ್ಲಿರುವ ತೋಟದಲ್ಲಿನ ಸೋಮಲಿಂಗ ಪುಂಡಲೀಕ ಮಾಳಕ್ಕನವರ ಮನೆಗೆ ರವಿವಾರ ದಿ.7ರಂದು ಬೆಂಕಿ ಬಿದ್ದು ಸುಟ್ಟು ಬೂದಿಯಾಗಿದೆ.
ಘಟನೆ: ಮುಂಜಾನೆ ಮನೆಯ ಪಕ್ಕದಲ್ಲಿರುವ ತಿಪ್ಪೆ ಗುಂಡಿಯಲ್ಲಿ ಒಲೆಯ ಬೂದಿಯನ್ನು ತಂದು ಹಾಕಿದ್ದರು. ಅದರಲ್ಲಿನ ಬೆಂಕಿ ಮನೆಗೆ ತಗುಲಿ ಸುಟ್ಟು ಹೋಗಿದೆ ಮನೆಯಲ್ಲಿನ ರೈತರು ಉಪಯೋಗಿಸುವ ಗಳೆಯ ಸಾಮಗ್ರಿಗಳು, ದವಸ ದಾನ್ಯಗಳು, ಬಾಳೆ ಹಣ್ಣು ಮಾರಿದ 50ಸಾವಿರ ಹಣ, ಗೃಹ ಬಳಕೆ ಸಾಮಾನುಗಳು, ಒಂದು ಬೈಕ್ ಸಂಪೂರ್ಣ ಸುಟ್ಟು ಹಾನಿಯಾಗಿದೆ ಎಂದು ಬಾಲವ್ವ ಪುಂಡಲೀಕ ಮಾಳಕ್ಕನವರ ತಿಳಿಸಿದರು.
ಮನೆಗೆ ಬೆಂಕಿ ಬಿದ್ದ ಕೂಡಲೆ ಅಕ್ಕಪಕ್ಕ ಯಾರು ಇರಲಿಲ್ಲ. ಹಾದಿಯಲ್ಲಿ ಸಂಚೆರಿಸುವವರು ನೋಡಿದಾಗ ಮನೆಗೆ ಬೆಂಕಿ ಹತ್ತಿದ್ದನ್ನು ಕಂಡು ಹೊಲದಲ್ಲಿ ಇದ್ದ ಸಾರ್ವಜನಿಕರು ಬೆಂಕಿ ನುಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಬೆಂಕಿ ಆರದೆ ಹೋದ ಕಾರಣ ತಕ್ಷಣ ಗೋಕಾಕ ಅಗ್ನಿ ಶ್ಯಾಮಕ ಸಿಬ್ಬಂದಿಗೆ ಕರೆ ಮಾಡಿದ ಕೂಡಲೆ ಬಂದು ಬೆಂಕಿ ನಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 