ಜಗತ್ತಿಗೆ ಯೋಗ ಭಾರತದ ಶ್ರೇಷ್ಠ ಕೊಡುಗೆ
ಲೋಕದರ್ಶನ ವರದಿ
ಅಥಣಿ 01: ಋಷಿ ಮುನಿಗಳ ನಾಡಾದ ಭಾರತದಲ್ಲಿ ಯೋಗ ಪ್ರಾಚೀನ ಕಾಲದಿಂದಲೂ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದ್ದು, ಇಂದು ಈಡೀ ಜಗತ್ತೇ ಭಾರತದತ್ತ ಹೊರಳಿ ನೋಡುವಂತೆ ಮಾಡಿದೆ ಎಂದು ಜೆ.ಇ ಶಿಕ್ಷಣ ಸಂಸ್ಥೆಯ ಕಾಯರ್ಾಧ್ಯಕ್ಷರಾದ ಅರವಿಂದರಾವ ದೇಶಪಾಂಡೆ ಹೇಳಿದರು.
ಇಲ್ಲಿಯ ಭೋಜರಾಜ ಕ್ರೀಡಾಂಗಣದಲ್ಲಿ ಶ್ವಾಸಗುರು ಶ್ರೀ ವಚನಾನಂದ ಅವರು ನಡೆಸಿಕೊಡುತ್ತಿರುವ ಯೋಗ ಶಿಬಿರದ ಉದ್ಘಾಟನೆಯನ್ನು ಸಸಿಗೆ ನೀರೆರೆಯುವ ಮೂಲಕ ನಡೆಸಿಕೊಡುತ್ತ, ಮೇಲಿನಂತೆ ಮಾತನಾಡಿ, ಹೊರದೇಶಗಳಿಗೆ ಭಾರತದಿಂದ ಯೋಗ ಶಿಕ್ಷಕರನ್ನು ತರಬೇತಿಗೊಳಿಸಿ ಕೊಡುವ ತುಂಬ ಮಹತ್ವದ ಜವಾಬ್ದಾರಿ ಭಾರತದ ಮೇಲಿದೆ ಎಂದರು.
ಶ್ವಾಸ ಗುರು ವಚನಾನಂದ ಸ್ವಾಮೀಜಿ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಈ ಸಮಯದಲ್ಲಿ ಪತಂಜಲಿ ಯೋಗ ಪೀಠದ ಕೃಷಿ ರಾಜ್ಯ ಪ್ರಭಾರಿ ಸಂಜಯ ಕುಸ್ತಿಗಾರ, ಯೋಗಶಿಕ್ಷಕರಾದ ಎಂ ಎ ಪಾಟೀಲ, ಶಿವಪುತ್ರ ಯಾದವಾಡ, ಅಜರ್ುನ ದೇವರು, ಸದಾಶಿವ ಚಿಕ್ಕಟ್ಟಿ, ಅಶೋಕ ಜಗದೇವ, ಶಿವಾನಂದ ಮಾಲಗಾಂವಿ ಉಪಸ್ಥಿತರಿದ್ದರು.ಯೋಗ ಗುರು ಎಸ್ ಕೆ ಹೊಳೆಪ್ಪನವರ ಸ್ವಾಗತಿಸಿದರು. ಡಾ ಆರ್ ಎಸ್ ದೊಡ್ಡನಿಂಪ್ಪಗೋಳ ನಿರೂಪಿಸಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 