ಶ್ರೀ ಕೃಷ್ಣ ಉತ್ಸವದ ನಿಮಿತ್ತ ನಡೆದ ವಾಲಿಬಾಲ್ ಪಂದ್ಯಾವಳಿ
ಲೋಕದರ್ಶನ
ವರದಿ
ಅಂಕೋಲಾ 20
: ಬೋಳೆ ಹೊಸಗದ್ದೆ ಗೌಡರಕೇರಿಯಲ್ಲಿ ಶ್ರೀ ಕೃಷ್ಣ ಉತ್ಸವ
ಸಮಿತಿಯವರು ಆಯೋಜಿಸಿದ್ದ 17ನೇ ವರ್ಷದ ವಾಲಿಬಾಲ್
ಪಂದ್ಯಾವಳಿಯನ್ನು ಪುರಸಭಾ ಸದಸ್ಯ ಕಾತರ್ಿಕ ಎಸ್. ನಾಯ್ಕ ಲಕ್ಷ್ಮೇಶ್ವರ
ಇವರು ಉದ್ಘಾಟಿಸಿ ಈ ಹಿಂದಿನಿಂದಲೂ ಗ್ರಾಮೀಣ
ಭಾಗದ ಇಲ್ಲಿಯ ಜನತೆ ಹಲವು ವಿದಾಯಕ
ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದ್ದನ್ನು ಹತ್ತಿರದಿಂದ ಕಂಡಿದ್ದೇನೆ. ನನ್ನ ಅನೇಕ ಮಿತ್ರರು
ಊರ ಹಿರಿಯರ ಮಾರ್ಗದರ್ಶನದಲ್ಲಿ ಶ್ರೀ ಕೃಷ್ಣ ಉತ್ಸವದ
ನಿಮಿತ್ತ ಹಮ್ಮಿಕೊಂಡಿರುವ ವಾಲಿಬಾಲ್ ಪಂದ್ಯಾವಳಿ ಊರಿನ ಒಗ್ಗಟ್ಟಿಗೆ ಸಾಕ್ಷಿಯಾಗಿ
ಯಶಸ್ವಿಯಾಗಲಿ ಎಂದರು.
ಶಿಕ್ಷಕರು ಮತ್ತು ಹಿರಿಯ ಕ್ರೀಡಾಪಟುಗಳಾದ ಕೆ.ಜಿ.ಗೌಡ
ಬೆಳಸೆ ಇವರು ಅಧ್ಯಕ್ಷತೆ ವಹಿಸಿ
ಮಾತನಾಡಿ ಚಿಕ್ಕಂದಿನಿಂದಲೇ ಸತತ ಅಭ್ಯಾಸದ ಮೂಲಕ
ಗುರುತಿಸಿಕೊಂಡು ಸಾಧನೆ ಮಾಡಬೇಕು. ಗ್ರಾಮೀಣ ಭಾಗದಲ್ಲಿಯೂ ಹಲವು ಉತ್ತಮ ಸೌಲಭ್ಯಗಳನ್ನು
ಒದಗಿಸಿದರೆ ಉತ್ತಮ ಕ್ರೀಡಾ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯ ಎಂದರು.
ಉತ್ಸವ ಸಮಿತಿಯ ಅಧ್ಯಕ್ಷ ಜೆ.ಆರ್.ರವಿ
ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗ್ರಾ.ಪಂ ಸದಸ್ಯ
ವಿಘ್ನೇಶ ಗೌಡ, ಮಾಜಿ ಸದಸ್ಯ
ಸೋಮೇಶ್ವರ ಗೌಡ, ನಿಣರ್ಾಯಕರಾದ ಶಂಕರ
ಗೌಡ ಅಂಬಾರಕೊಡ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಾಗವಹಿಸಿದ ಒಟ್ಟೂ 8 ತಂಡಗಳಲ್ಲಿ ಅಂತಿಮವಾಗಿ ಬಾಲಗೋಪಾಲ
ಎ ತಂಡ (ಪ್ರಥಮ) ಮಾಹಾಸತಿ
ಯಂಗ್ ಬಾಯ್ಸ್ ತಂಡ (ದ್ವೀತಿಯ)
ಬಹುಮಾನ ಪಡೆದುಕೊಂಡರು. ಶ್ರೀ ಕೃಷ್ಣ ಉತ್ಸವ
ಸಮಿತಿಯ ಪದಾಧಿಕಾರಿಗಳು,ಸದಸ್ಯರು ಮತ್ತು ಊರ ನಾಗರಿಕರು ಸಹಕರಿಸಿದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 