ಇಂದು ಮಾಧವಾನಂದ ಪ್ರಭೂಜಿಯವರ ಜನ್ಮೋತ್ಸವ

ರಬಕವಿ-ಬನಹಟ್ಟಿ : ಬನಹಟ್ಟಿ ನಗರದ ಹೂಗಾರ ತೋಟದ ಆವರಣದಲ್ಲಿರುವ ಆಶ್ರಮದಲ್ಲಿ ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿಯವರ 108 ನೇ ಜನ್ಮೋತ್ಸವ ಹಾಗೂ ಸ.ಸ. ಶಿವಪ್ರಭು ಮಹಾರಾಜರ ಪರಮಶಿಷ್ಯರಾದ ಕಲ್ಲಪ್ಪ ಹೂಗಾರ ಮಹಾರಾಜರ ಪುಣ್ಯಸ್ಮರಣೋತ್ಸವ ಆಧ್ಯಾತ್ಮ ಸಪ್ತಾಹ ಇಂದು ಬೆಳಿಗ್ಗೆ 10 ಗಂಟೆಗೆ ಶ್ರೀಕ್ಷೇತ್ರ ಇಂಚಗೇರಿ ಮಠದ ಸಮರ್ಥ ಸದ್ಗುರು ರೇವಣಸಿದ್ಧೇಶ್ವರ ಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ ಜರಗುವದು. 

ಈ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಭಜನೆ, ದಾಸಬೋಧ ಪಠಣ, ಪುರಾಣ, ಪ್ರವಚನ, ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿಯವರ ತೊಟ್ಟಿಲೋತ್ಸವ,  ಸ.ಸ.ರೇವಣಸಿದ್ದೇಶ್ವರ ಮಹಾರಾಜರ ಆಶೀರ್ವಚನ ನಡೆದು ಪುಷ್ಪವೃಷ್ಠಿಯೊಂದಿಗೆ ಸಪ್ತಾಹ ಮಂಗಲಗೊಳ್ಳುವದು. ಸಪ್ತಾಹದಲ್ಲಿ ಜಮಖಂಡಿ ಶಾಸಕ ಜಗದೀಶ ಗುಡಗುಂಟಿಮಠ, ತೇರದಾಳ ಶಾಸಕ ಸಿದ್ದು ಸವದಿ, ಸಿದ್ದು ಕೊಣ್ಣೂರ ಸೇರಿದಂತೆ ಅನೇಕರು ಅತಿಥಿಗಳಾಗಿ ಆಗಮಿಸುವರು. ಆಧ್ಯಾತ್ಮ ಕಾರ್ಯಕ್ರಮದಲ್ಲಿ ಸರ್ವ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದ್ಗುರುಗಳ ಕೃಪೆಗೆ ಪಾತ್ರರಾಗಬೇಕಾಗಬೇಕೆಂದು ಆಶ್ರಮದ ಮೋರ್ತಿಪ್ಪ ಹೂಗಾರ, ಗುರು ಹೂಗಾರ ಹಾಗೂ ಶಂಕರ ಹೂಗಾರ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ