ಉತ್ತರ ಕನ್ನಡ ಧಾರವಾಡ ಪೀಠದ ವ್ಯಾಪ್ತಿಯಲ್ಲೇ ಇರಲಿ: ವಕೀಲರ ಒತ್ತಾಯ
Retain it within the jurisdiction of the Uttara Kannada-Dharwad Bench: Lawyers urge
ದಾಂಡೇಲಿ 04: ಮಂಗಳೂರಿನಲ್ಲಿ ಹೊಸ ಹೈಕೊರ್ಟ ಪೀಠ ಸ್ಥಾಪನೆಗೆ ವಿರೋದವಿಲ್ಲ. ಆದರೆ ಈಗಾಗಲೇ ಧಾರವಾಡ ಪೀಠದ ವ್ಯಾಪ್ತಿಯಲ್ಲಿರುವ ಉತ್ತರ ಕನ್ನಡ ಜಿಲ್ಲೆಯನ್ನು ಬೇರಿ್ಡಸುವದು ನ್ಯಾಯಸಮ್ಮತವಲ್ಲ. ಈ ಕುರಿತು ಸರ್ಕಾರ ಅಚಿತಿಮ ನಿರ್ಧಾರ ಕೈಗೊಳ್ಳುವ ಮುನ್ನ ಜನಪ್ರತಿನಿಧಿಗಳು, ವಕೀಲರು ಹಾಗೂ ಸಾರ್ವಜನಿಕರ ಅಭಿಪ್ರಾಯಗಳನ್ನು ಪರಿಗಣಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಶಾಸಕ ಆರ್.ವಿ ದೇಶಪಾಂಡೆ ಅವರನ್ನು ಬೇಟಿ ಮಾಡಿ ಆಲ್ ಇಂಡಿಯಾ ಲಾಯರಸ್ ಯುನಿಯನ್ ಸದಸ್ಯರು ಮತ್ತು ಹೈ ಕೊರ್ಟ ವಕೀಲರು ವಿರೋಧ ವ್ಯಕ್ತ ಪಡಿಸಿ ಮನವಿ ಸಲ್ಲಿಸಿರುತ್ತಾರೆ.
ಭೌಗೋಳೀಕವಾಗಿ ಉತ್ತರ ಕನ್ನಡ ಬಹುತೇಕ ತಾಲೂಕುಗಳಿಗೆ ಮಂಗಳೂರಿಗಿಂತ ಧಾರವಾಡವೇ ಸಮೀಪದಲ್ಲಿರುತ್ತಿದ್ದು ರಸ್ತೆ ಸಂಪರ್ಕ, ನ್ಯಾಯಾಂಗ ವ್ಯವಹಾರಗಳ ದೃಷ್ಟಿಯಿಂದಲೂ ಹೆಚ್ಚು ಅನುಕೂಲಕರವಾಗಿದೆ. ಈ ಸಂದರ್ಭದಲ್ಲಿ ಮಂಗಳೂರು ಪೀಠಕ್ಕೆ ಜಿಲ್ಲೆಯನ್ನು ಸೇರಿಸುವದು ಅವೈಜ್ಞಾನಿಕ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ದವಾದ ನಿರ್ಧಾರವಾಗಲಿದೆ ಎಂದು ವಕೀಲರು ಅಭಿಪ್ರಾಯ ಪಟ್ಟರು. ಮನವಿ ಸಲ್ಲಿಸಿದ ನಿಯೋಗದಲ್ಲಿ ಎ.ಐ.ಎಲ್.ಯೂ ಸದಸ್ಯರಾದ ರತ್ನ ದೀಪ, ಆಫ್ರೀನ್ ಕಿತ್ತುರು, ಗೀರೀಶ ಭಟ್ಟ, ವಿಶ್ವನಾಥ ಹೆಗಡೆ, ಪ್ರವೀಣ ತರೇಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 