ಹೋಳಿ ಹಬ್ಬದ ನಿಮಿತ್ಯ ಶಾಂತಿ ಪಾಲನೆ ಸಭೆ
Peacekeeping meeting on the occasion of Holi festival
ಯರಗಟ್ಟಿ, 28 : ಸಮೀಪದ ಗ್ರಾಮದಲ್ಲಿ ಹೋಳಿ ಹಬ್ಬ ಐತಿಹಾಸಿಕ ಮಹತ್ವ ಹೊಂದಿದ್ದು, ಯಾವುದೇ ರೀತಿಯ ಗೊಂದಲ ಗಲಾಟೆಗಳಿಗೆ ಅವಕಾಶ ನೀಡದಂತೆ ಶಾಂತಿಯುತ ಹಬ್ಬ ಆಚರಣೆ ನಡೆಯಲಿ ಎಂದು ಮುರಗೋಡ ಠಾಣೆ ಪಿಎಸ್ಐ ಡಬ್ಲೂ.ಎಚ್.ಯಾದವಾಡ ಹೇಳಿದರು. ಗ್ರಾಮದ ಮಾರುತಿ ಮಂದಿರ ಸಭಾಭವನದಲ್ಲಿ ಹೋಳಿ ಹಾಗೂ ರಂಜಾನ ಹಬ್ಬದ ಅಂಗವಾಗಿ ಶುಕ್ರವಾರ ಹಮ್ಮಿಕೊಡಿದ್ದ ಶಾಂತಿ ಪಾಲನೆ ಸಭೆಯಲ್ಲಿ ಮಾತನಾಡಿದರು. ಪಿಡಿಒ ರಾಘವೇಂದ್ರಕುಮಾರ ಎಸ್.ಪಿ, ಮಾತನಾಡಿ, ಗ್ರಾಮದ ಯುವಕರು ವಾರ್ನಿಸ ತತ್ತಿ ಎಸೆಯುವದನ್ನು ನಿಷೇಧಿಸಲಾಗಿದ್ದು. ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸಬೇಕು ದ್ವಿತೀಯ ಪಿಯುಸಿ ಪರೀಕ್ಷೆ ಇರುವದರಿಂದ ಬಲವಂತವಾಗಿ ಬಣ್ಣ ಎರಚಬಾರದು ಎಂದರು.ಹುಸೇನಬಿ ಕುದರಿ, ಮಹಾದೇವ ಬೆನಕಟ್ಟಿ, ಪಕ್ರುಸಾಬ ಬಾಗವಾನ, ನೀಲಕಂಠ ಹಂಜಿ, ಬಸವಣ್ಣೆಪ್ಪ ಕಲಬಸನ್ನವರ, ಮಂಜುನಾಥ ಬಂದಕನವರ, ಅರುಣ ವನ್ನೂರ, ಪರಸಪ್ಪ ಮಾದರ ಸಂಜೀವಿನಿ ಮಹಿಳಾ ಸಂಘದ ಸದಸ್ಯರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 