ಆಧಾರ ಕಾರ್ಡ್ ಗಾಗಿ ಬೆಳಗಿನ ಜಾವ ಕ್ಯೂ !

ರಬಕವಿ-ಬನಹಟ್ಟಿ : ಕರ್ನಾಟಕ ಸರಕಾರ ಯೋಜನೆಗಳಾದ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆ ಲಾಭ ಪಡೆಯಲು ಬಹುಮುಖ್ಯ ದಾಖಲಾತಿಯಾಗಿರುವ ಆಧಾರ ಕಾರ್ಡ್  ತಿದ್ದುಪಡಿಗಾಗಿ ಆಧಾರ ಕೇಂದ್ರದ ಮುಂದೆ ಬೆಳಗಿನ ಜಾವ ಕ್ಯೂ (ಸಾಲು) ನಲ್ಲಿ ನಿಲ್ಲುವ ಪ್ರಸಂಗ ಒದಗಿ ಬಂದಿದೆ.

ಆಧಾರ ಕಾರ್ಡ್  ವಿಳಾಸ, ಮೊಬೈಲ್ ಸಂಖ್ಯೆ ಬದಲಾವಣೆ, ಬ್ಯಾಂಕ್ ಖಾತೆಗೆ ಸಂಪರ್ಕ ಪಡೆಯಲು ಸಾರ್ವಜನಿಕರು ಬನಹಟ್ಟಿ ನಗರದ ಬ್ಯಾಂಕ್ ಆಪ್ ಬರೋಡ್ದ ಆಧಾರ ಕೇಂದ್ರ ಮುಂದೆ ಬೆಳಗಿನ ಜಾವ 5 ಗಂಟೆಯಿಂದ ಸರತಿ ಸಾಲಿನ ನಿಲ್ಲುತ್ತಿದ್ದಾರೆ. ಸರಕಾರದ ಯೋಜನೆಗಳ ಲಾಭ ಪಡೆಯಲು ಆಧಾರ ಕಾಡರ್್ನ ಎಲ್ಲ ವಿವರಗಳು ಸರಿಯಾಗಿದ್ದರೆ ಮಾತ್ರ ಯೋಜನೆಗೆ ಅರ್ಹವಾಗಿರುವುದರಿಂದ ಬಹಳಷ್ಟು ಸಾರ್ವಜನಿಕರು ಆಧಾರ ಕಾರ್ಡ್ ಮಾಹಿತಿ ಸರಿ ಪಡಿಸಲು ಅನಿವಾರ್ಯವಾಗಿರುವುದರಿಂದ ಆಧಾರ ಕೇಂದ್ರವಿರುವ ಬ್ಯಾಂಕ್ ಆಪ್ ಬರೋಡ್ದ ಮುಂದೆ ಸ್ತ್ರೀ-ಪುರುಷರು ಬೆಳ್ಳಂಬೆಳಗ್ಗೆ ಸರದಿಯ ಸಾಲಿನಲ್ಲಿ ನಿಂತು ಆಧಾರ ಕಾರ್ಡ್  ತಿದ್ದುಪಡಿ ಮಾಡಿಸುತ್ತಿದ್ದಾರೆ