ವಿದ್ಯಾಪ್ರಚಾರಕ ಮಂಡಳಿಗೆ ಮಾಲಪಾಣಿ ಆಯ್ಕೆ

ಗುಳೇದಗುಡ್ಡ 28:   ಪಟ್ಟಣದ ಲಕ್ಷ್ಮೀ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಕಮಲಕಿಶೋರ ಮಾಲಪಾಣಿ ಅವರು, ಗುಳೇದಗುಡ್ಡದ ಮಾಹೇಶ್ವರಿ ಸಮಾಜದ ವಿದ್ಯಾಪ್ರಚಾರಕ ಮಂಡಳದ ಚೇರ್ಮನ್ನರಾಗಿ ಎರಡನೇ ಅವಧಿಗೆ ಪುನರ್ ಆಯ್ಕೆಯಾಗಿದ್ದಾರೆ. 

ಕಮಲಕಿಶೋರ ಮಾಲಪಾಣಿ ಅವರು ಕರ್ನಾಟಕ-ಗೋವಾ ರಾಜ್ಯದ ಮಾಹೇಶ್ವರಿ ಸಭಾದ ಹಾಲಿ ಉಪಾಧ್ಯಕ್ಷ ಸದಸ್ಯರಾಗಿ ಪ್ರಸ್ತುತ ಸೇವೆ ಸಲ್ಲಿಸಿಸುತ್ತಿದ್ದಾರೆ. ಈ ಹಿಂದೆ ಗುಳೇದಗುಡ್ಡ ಪುರಸಭೆ ಸದಸ್ಯರಾಗಿ, ಸ್ಥಾಯಿ ಸಮಿತಿ ಚೇರ್ಮನ್ನರಾಗಿ ತಮ್ಮ ಅಧಿಕಾರಾವಧಿಯಲ್ಲಿ ವಿವಿಧ ಜನಪರ ಸೇವಾ ಕಾರ್ಯಗಳನ್ನು ಮಾಡಿದ್ದಾರೆ. ಸದ್ಯ ಪಟ್ಟಣದ ಪ್ರತಿಷ್ಠಿತ ಲಕ್ಷ್ಮೀ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾಗಿ ಸಹಕಾರಿ ಕ್ಷೇತ್ರದಲ್ಲೂ  ತಮ್ಮನ್ನು ತೊಡಗಿಸಿಕೊಂಡಿದ್ದಾರೆ.