ಬಡತನದಲ್ಲೂ ಮೆರೆದ ಮಾನವೀಯತೆ: ಮಹಾಲಿಂಗಪುರದಲ್ಲಿ ಕಣ್ಣೀರಾಗಿಸಿತು ಅಪರೂಪದ ಕ್ಷಣ
Humanity shines amidst poverty: A rare, tear-jerking moment in Mahalingapura
ಮಹಾಲಿಂಗಪುರ 2: ಇಂದಿನ ಸ್ವಾರ್ಥಮಯ ಸಮಾಜದಲ್ಲಿ ಹಣವೇ ಎಲ್ಲವೂ ಎಂಬ ಭಾವನೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಮಹಾಲಿಂಗಪುರ ಪುರಸಭೆಯ ಮುಂಭಾಗದಲ್ಲಿ ಗುರುವಾರ ನಡೆದ ಒಂದು ಮನಕಲಕುವ ಘಟನೆ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾಕ್ಷಿಕರಿಸಿತು. ಹೊಟ್ಟೆಪಾಡಿಗಾಗಿ ಹೋರಾಡುವ ಇಬ್ಬರು ವೃದ್ಧೆಯರ ನಡುವೆ ನಡೆದ ಈ ಅಪರೂಪದ ಘಟನೆ ಅಲ್ಲಿದ್ದವರ ಹೃದಯವನ್ನು ಸ್ಪರ್ಶಿಸಿತು.
ಪುರಸಭೆಯ ಮುಂಭಾಗದ ರಸ್ತೆಯ ಬದಿಯಲ್ಲಿ ಕಾಲಿನ ಸಮಸ್ಯೆಯಿಂದ ಸರಿಯಾಗಿ ನಡೆಯಲು ಸಾಧ್ಯವಾಗದ ಅಂಗವಿಕಲ ವೃದ್ಧೆಯೊಬ್ಬರು ತಮ್ಮ ಬಳಿ ತಂದಿದ್ದ ಸ್ವಲ್ಪ ತರಕಾರಿಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಜೀವನವೇ ಕಷ್ಟಗಳ ಸರಮಾಲೆಯಾಗಿದ್ದರೂ, ಯಾರ ಮುಂದೆಯೂ ಕೈಚಾಚದೆ, ದುಡಿದು ಬದುಕಬೇಕು ಎಂಬ ಆತ್ಮಗೌರವದ ಬದುಕನ್ನು ಅವರು ನಡೆಸುತ್ತಿದ್ದರು. ಅದೇ ವೇಳೆ ಸಮೀಪದಲ್ಲೇ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಮತ್ತೊಬ್ಬ ವೃದ್ಧೆ, ದಾನಿಗಳು ನೀಡಿದ್ದ ಅಲ್ಪಸ್ವಲ್ಪ ಹಣವನ್ನು ಕೈಯಲ್ಲಿ ಹಿಡಿದು ಆ ಅಂಗವಿಕಲ ಅಜ್ಜಿಯ ಬಳಿ ಬಂದರು. ತಮ್ಮ ಕಷ್ಟವನ್ನೂ ಮರೆತು, ಈ ಹಣದಲ್ಲಿ ಸ್ವಲ್ಪವಾದರೂ ನಿಮಗೆ ಉಪಯೋಗವಾಗಲಿ ಎಂಬ ಕರುಣೆಯಿಂದ ಆ ಹಣವನ್ನು ನೀಡಲು ಮುಂದಾದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 