ಮಂಜುನಾಥ್ ಬೈಲಪತ್ತಾರ್ರವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ
ಗದಗ 01: ಮಂಜುನಾಥ್ ಬೈಲಪತ್ತಾರ್ ಅಪ್ಪಾಜಿ ಕಾಯಕಯೋಗಿಗಳು ಸಾ. ನೀಲಗುಂದ, ಬದಾಮಿ ತಾಲೂಕ ಬಾಗಲಕೋಟೆ ಜಿಲ್ಲೆ ರವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನ ಏಷ್ಯಾ ಇಂಟರ್ನ್ಯಾಶನಲ್ ಕಲ್ಚರ್ ಅಕಾಡೆಮಿ ಮ್ಯಾನೇಜ್ಮೆಂಟ್ ಚೆನ್ನೈ ಅನುಮೋದಿಸಿದ್ದು, ಅಕಾಡೆಮಿಯು ಸಾಮಾಜಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದಕ್ಕೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಮಾರ್ಚ-29 ರಂದು ಚೆನ್ನೈ ನಲ್ಲಿ ನಡೆದ ಸಮಾರಂಭದಲ್ಲಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಶ್ರೀಗಳ ಅಭಿನಂದನಾ ಕಾರ್ಯವು ಭಕ್ತ ಸಮೂಹದಲ್ಲಿ ಸಂತಸ ತಂದಿದ್ದು, ಅಭಿನಂದನೆ ಸಲ್ಲಿಸಿದೆ.