ಹಿಟ್ಟಕ್ಕಿ ವಾಹನ ಪ್ರಯಾಣಕ್ಕೆ ಚಾಲನೆ
Hittakki vehicle journey begins
ಲೋಕದರ್ಶನ ವರದಿ
ಮಹಾಲಿಂಗಪುರ 12 : ಮಹಾಲಿಂಗಪುರದ ಶ್ರೀಶೈಲ ಮಲ್ಲಿಕಾರ್ಜುನ ಅನ್ನದಾಸೋಹ ಸಮಿತಿ ವತಿಯಿಂದ ಶ್ರೀಶೈಲದಲ್ಲಿ 7 ದಿನಗಳ ನಿರಂತರ ಅನ್ನದಾಸೋಹ ನೆರವೇರಿಸಲು 21ನೇ ವರ್ಷವೂ 16 ಟನ್ ಹಿಟ್ಟಕ್ಕಿಯೊಂದಿಗೆ ಭಕ್ತರು ಬುಧವಾರ ರಾತ್ರಿ 11.15 ಗಂಟೆಗೆ ಶ್ರೀಶೈಲಕ್ಕೆ ಪ್ರಯಾಣ ಬೆಳೆಸಿದರು.
ಮಾ.13 ರಿಂದ ಶುಕ್ರವಾರದಿಂದ ಮಾ.19 ಗುರುವಾರ ಯುಗಾದಿ ಪಾಡ್ಯದವರೆಗೆ ಶ್ರೀಶೈಲದಲ್ಲಿ ನಾಡಿನ ಮೂಲೆ ಮೂಲೆಯಿಂದ ಆಗಮಿಸಿದ ಭಕ್ತರಿಗೆ ನಿರಂತರ ಅನ್ನದಾಸೋಹ ನೆರವೇರಿಸಲಾಗುತ್ತದೆ.
ಶ್ರೀಶೈಲದಲ್ಲಿ ಬೀಡುಬಿಡುವ ಮಹಾಲಿಂಗಪುರದ ಶ್ರೀಶೈಲ ಮಲ್ಲಿಕಾರ್ಜುನ ಅನ್ನದಾಸೋಹ ಸೇವಾ ಸಮಿತಿಗೆ ರಾಜ್ಯ ಮತ್ತು ಪರರಾಜ್ಯದ ಯಥೇಚ್ಛ ಹಿಟ್ಟಕ್ಕಿ ನೀಡುವುದರಿಂದ ಮಹಾಲಿಂಗಪುರದಿಂದ ಒಯ್ಯುವ ಹಿಟ್ಟಕ್ಕಿಯ ಎರಡು ಪಟ್ಟು ಹಿಟ್ಟಕ್ಕಿ ಪ್ರತಿ ವರ್ಷ ಸಂಗ್ರಹವಾಗುತ್ತಿರುವುದು ಮಹಾಲಿಂಗಪುರ ಸೇವಾ ಸಮಿತಿಯ ಹೆಗ್ಗಳಿಕೆ.
ಸ್ಥಳೀಯ ಮಹಾಲಿಂಗೇಶ್ವರ ಮಠದ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಮಠದ ಆಡಳಿತಾಧಿಕಾರಿ ಈಶ್ವರ ಮಠದ ಹಿಟ್ಟಕ್ಕಿ ವಾಹನಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಸೇವಾ ಸಮಿತಿ ಅಧ್ಯಕ್ಷ ವಿಜುಗೌಡ ಪಾಟೀಲ, ಉಪಾಧ್ಯಕ್ಷ ವಿಷ್ಣುಗೌಡ ಪಾಟೀಲ ಕಾರ್ಯದರ್ಶಿ ಶಂಕರ ಮರಗೋಡ, ಖಜಾಂಚಿ ಸಿದ್ರಾಮ ದಲಾಲ, ಸದಸ್ಯರಾದ ವಿಜಯ ಕಂಬಾರ, ಶಿವಾನಂದ ಮಠಪತಿ, ಮಹಾಲಿಂಗಪ್ಪ ಗುರವ, ವೀರಭದ್ರಯ್ಯ ಮಠಪತಿ, ಮಹಾಲಿಂಗಪ್ಪ ಪರೀಟ, ಯಲ್ಲಪ್ಪ ಹಟ್ಟಿ, ಶೇಖರ ವಗ್ಗರ ಇತರರಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 