ಬಡವರ ಅನುಕೂಲಕ್ಕಾಗಿ ಉಚಿತ ಶವಸಂಸ್ಕಾರ ವಾಹನ ಸೇವೆ ಲೋಕಾರೆ​‍್ಣ

ಬಡವರ ಅನುಕೂಲಕ್ಕಾಗಿ ಉಚಿತ ಶವಸಂಸ್ಕಾರ ವಾಹನ ಸೇವೆ ಲೋಕಾರೆ​‍್ಣ  Free funeral transport service launched for the benefit of the poor

ಕೊಪ್ಪಳ  4: ನಗರದ ಬಡವರು, ನಿರ್ಗತಿಕರು ಹಾಗೂ ಖಬ್ರಸ್ತಾನ್ ದೂರವಿರುವ ಕಾಲೊನಿಗಳ ನಿವಾಸಿಗಳ ಅನುಕೂಲಕ್ಕಾಗಿ ಅಲ್ ಅಮೀನ್ ಬೈತುಲ್ ಮಾಲ್ ಕಮಿಟಿ ವತಿಯಿಂದ ಉಚಿತ ಶವಸಂಸ್ಕಾರ ವಾಹನವನ್ನು ಸಾರ್ವಜನಿಕ ಸೇವೆಗೆ ಶುಕ್ರವಾರ ಲೋಕಾರೆ​‍್ಣ ಮಾಡಲಾಯಿತು.  ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ಧರ್ಮಗುರುಗಳ ಪವಿತ್ರ ಹಸ್ತದಿಂದ ವಾಹನವನ್ನು ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಸಮರ​‍್ಿಸಲಾಯಿತು.  

ಈ ಸಂದರ್ಭದಲ್ಲಿ ಸಮುದಾಯದ ಮುಖಂಡರು ಮಾತನಾಡಿ, ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ವಾಹನ ವ್ಯವಸ್ಥೆ ಕಲ್ಪಿಸುವುದು ಕಷ್ಟಕರವಾಗಿತ್ತು. ಈ ಅಗತ್ಯವನ್ನು ಮನಗಂಡು ಅಲ್ ಅಮೀನ್ ಬೈತುಲ್ ಮಾಲ್ ಕಮಿಟಿ ಉಚಿತ ಶವಸಂಸ್ಕಾರ ವಾಹನ ಸೇವೆಯನ್ನು ಆರಂಭಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.  

ಕಷ್ಟದ ಸಮಯದಲ್ಲಿ ಅಗತ್ಯವಿರುವ ಕುಟುಂಬಗಳಿಗೆ ಈ ವಾಹನ ಉಚಿತವಾಗಿ ಸೇವೆ ನೀಡಲಿದ್ದು, ಸಮಾಜಮುಖಿ ಕಾರ್ಯಗಳಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.  ಕಾರ್ಯಕ್ರಮದಲ್ಲಿ ಕಮಿಟಿಯ ಪದಾಧಿಕಾರಿಗಳು, ಉಲಮಾಗಳು, ಸಮಾಜದ ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ವಾಹನ ಸೇವೆಯ ಯಶಸ್ಸಿಗೆ ಶುಭ ಹಾರೈಸಲಾಯಿತು.