ಮುಸ್ಲಿಂ ಸಮಾಜದ ಯುವಕರಿಂದ ಹಣ್ಣು ಹಂಪಲ ವಿತರಣೆ
ಲೋಕದರ್ಶನ ವರದಿ
ಕಂಪ್ಲಿ11: ಹುಟ್ಟು ಹಬ್ಬದ ನೆನದಲ್ಲಿ ದುಂದು ವೆಚ್ಚ ಮಾಡುವ ಬದಲಿಗೆ ಅನಾಥರಿಗೆ ದೀನದಲಿತರು, ಬಡ ಬಗ್ಗರಿಗೆ ದಾನ ಧರ್ಮ ಮಾಡುವಲ್ಲಿ ಆಥರ್ಿಕ ಹೃದಯ ವಿಶಾಲರು ಮುಂದಾಗಬೇಕು ಎಂದು ಮುಸ್ಲಿಂ ಸಮಾಜದ ಮುಖಂಡ ಎಂ.ಇಸ್ಮಾಯಿಲ್ ಬೇಗ್ ಹೇಳಿದರು.
ಶನಿವಾರ ಇಲ್ಲಿನ ಗಂಗಾವತಿ ರಸ್ತೆಯಲ್ಲಿನ ಹಜರತ್ ಸೈಯ್ಯದ್ ಷಾಹ್ ಬಡೇಸಾಹೇಬ್ ಖಾದ್ರಿ ದಗರ್ಾದಲ್ಲಿ, ಹಜರತ್ ಟಿಪ್ಪು ಸುಲ್ತಾನ್ ಜಯಂತಿ ನಿಮಿತ್ತ ದೀನರು, ಭಿಕ್ಷುಕರಿಗೆ ಇಸ್ಮಾಯಿಲ್ ಬೇಗ್ ನೇತೃತ್ವದಲ್ಲಿ ಮುಸ್ಲಿಂ ಸಮಾಜದ ಯುವಕರಿಂದ ಹಚ್ಚಡ(ಬೆಡ್ ಶೀಟ್), ಹಣ್ಣು, ಬಿಸ್ಕೇಟ್, ಬ್ರೆಡ್, ಸಿಹಿ ವಿತರಿಸಿ ಮಾತನಾಡಿ, ಸರಳ ಜೀವನ ನಡೆಸುವ ಮೂಲಕ ಅನ್ಯರಿಗೆ ಸಹಾಯ ಮಾಡಬೇಕಾಗಿದೆ. ಯುವಜನತೆ ಭಿಕ್ಷುಕರು, ದೀನರು, ಬಡವರಿಗೆ ಸಹಾಯ ಹಸ್ತ ಚಾಚುವ ಗುಣ ಬೆಳೆಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಗುರುಗಳಾದ ಸೈಯ್ಯದ್ ಷಾಹ್ ಅಬ್ದುಲ್ ಖಾದರ್ ಖಾದ್ರಿ, ಮುಸ್ಲಿಂ ಸಮಾಜದ ಯುವಕರಾದ ಪಿ.ಶಕೀಲ್, ಜೆ.ಅನ್ವರ್ಸಾಬ್, ಫಯಾಜ್, ಖಲೀಕ್, ಶೌಖತ್ ಆಲಿ, ಜಿ.ಆಸೀಫ್, ಕೆ.ಫಯಾಜ್, ಶೋಯೇಬ್ ಆಖ್ತರ್ ಭಾಷ, ಖಲಂದರ್ ಸೇರಿ ಅನೇಕರು ಇದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 