ಬಸ್ ಪಾಸ್ ನೀಡುವಲ್ಲಿ ವಿಳಂಬ, ಸಾರ್ವಜನಿಕರ ಆಕ್ರೋಶ
ಲೋಕದರ್ಶನವರದಿ
ರಾಣೇಬೆನ್ನೂರು 03: ಶೈಕ್ಷಣಿಕ ವರ್ಷ ಆರಂಭಗೊಂಡರೂ ಸಹ ಈವರೆಗೂ ವಿದ್ಯಾಥರ್ಿಗಳಿಗೆ ಬಸ್ ಪಾಸ್ ವ್ಯವಸ್ಥೆ ಕಲ್ಪಿಸದಿರುವುದನ್ನು ಖಂಡಿಸಿ ಮತ್ತು ತುತರ್ಾಗಿ ಬಸ್ ಪಾಸ್ ವಿತರಿಸಬೇಕೆಂದು ಆಗ್ರಹಿಸಿ ವಿದ್ಯಾಥರ್ಿಗಳು, ರೈತ ಮುಖಂಡರು ಪ್ರತಿಭಟಿಸಿ ಸ್ಥಳೀಯ ಕೆಎಸ್ಆರ್ಟಿಸಿ ವ್ಯವಸ್ಥಾಪಕರಿಗೆ ಮನವಿ ಅಪರ್ಿಸಿ ಆಗ್ರಹಿಸಿದರು.
ರೈತ ಸಂಘದ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ ಇದೀಗ ವಿದ್ಯಾಥರ್ಿಗಳಿಗೆ ಬಹಳಷ್ಟು ತೊಂದರೆಯಾಗಿದೆ. ಬೇರೆಡೆ ಹಳೆ ಬಸ್ ಪಾಸ್ ಮೂಲಕವೇ ಅವಕಾಶ ನೀಡಿದ್ದು, ಇಲ್ಲಿಯೂ ಸಹ ವಿದ್ಯಾಥರ್ಿಗಳ ಹಿತದೃಷ್ಠಿಯಿಂದ ಅನುಕೂಲ ಮಾಡಬೇಕು, ಇದರಿಂದ ವಿದ್ಯಾಥರ್ಿಗಳ ಭವಿಷ್ಯ ಉತ್ತಮಗೊಳ್ಳುವುದು ಎಂದರು.
ರೈತರ ಮಕ್ಕಳೇ ಅಧಿಕವಾಗಿ ವಿದ್ಯಾರ್ಜನೆಗೆ ನಗರಕ್ಕೆ ಬರುತ್ತಿದ್ದು, ಅವರುಗಳಿಗೆ ತೊಂದರೆಯಾಗದಂತೆ ತುತರ್ಾಗಿ ಕ್ರಮ ಕೈಗೊಳ್ಳಬೇಕು ಎಂದರು. ರತ್ನಾಕರ ಕುಂದಾಪುರ, ಕೃಷ್ಣಮೂತರ್ಿ ಗುಂಗೇರ, ರಾಮನಗೌಡ ಪಾಟೀಲ, ಚಂದ್ರಪ್ಪ ಚಳಗೇರಿ, ಎಸ್ಡಿ ಹಿರೇಮಠ, ಪ್ರಕಾಶ ಕುಂದಾಪುರ, ಈರಪ್ಪ ದೊಡ್ಡಮನಿ, ರವಿ ಆರೇರ, ಸಿಸಿ ಸಣ್ಣಗೌಡ್ರ, ಪ್ರಕಾಶ್ ಕುಂದಾಪುರ, ವಿದ್ಯಾಥರ್ಿಗಳು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 