ಬಳ್ಳಾರಿ: ಯಶಸ್ವಿ ಸ್ಲಂ ನಿವಾಸಿ ಮುಗ್ದ ಮಕ್ಕಳ ಬೇಸಿಗೆ ಶಿಬಿರ
ಲೋಕದರ್ಶನ ವರದಿ
ಬಳ್ಳಾರಿ 08: ಸ್ಲಂ ನಿವಾಸಿ ಮುಗ್ದ ಮಕ್ಕಳಿಗಾಗಿ ಮೂರು ದಿನಗಳ ಬೇಸಿಗೆ ಶಿಬಿರ ಯಶಸ್ವಿಯಾಗಿ ತಾರಾನಾಥಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಿತು. ಸೋದರಿ ನಿವೇದಿತಾ ಪ್ರತಿಷ್ಠಾನ, ಮಾತೃ ಮಹಿಳಾ ಮಂಡಳಿಯ ಸಹಭಾಗಿತ್ವದಲ್ಲಿ ಮಕ್ಕಳಿಗೆ ಆರೋಗ್ಯಕರ ಹವ್ಯಾಸಗಳ ತರಬೇತಿ ನೀಡಲಾಯಿತು. ಯೋಗ, ಶ್ಲೋಕಗಳು ಹಾಗೂ ಅರ್ಥ ಮತ್ತು ಮೌಲ್ಯಗಳು ಸ್ವಚ್ಛತೆಯ ಅರಿವು ಮಕ್ಕಳಿಗೆ ಗಿಡ ನೆಡುವುದರ ಮಹತ್ವ ಮತ್ತು ಗಿಡ ನೆಡೆಸುವ ಮೂಲಕ ಕಾಲೇಜಿನ ಪ್ರಾಂಶುಪಾಲರಾದ ಡಾ.ಸೈಯದ್ ಅತ್ಹರ್ ಫಾತಿಮಾ, ಸೋದರಿ ನಿವೇದಿತಾ ಜಿಲ್ಲಾ ಸಂಚಾಲಕರಾದ ಚಂದ್ರಿಕಾ ಚಂದ್ರಕಾಂತ್ ಹಾಗೂ ಮಾತೃ ಮಹಿಳಾ ಮಂಡಳಿಯ ಅಧ್ಯಕ್ಷರಾದ ಪುಷ್ಪಾ, ಸೋದರಿಯತರಾದ ಪಾರ್ವತಿ, ಸುನೀತಾ, ಶ್ರೀದೇವಿ, ವಸಂತ, ಶ್ರೀನಿಧಿ, ಕವಿತಾ ಮತ್ತು ಡಾ.ಅಕ್ಕಮಹಾದೇವಿಯವರೊಡನೆ ಡಾ.ಶ್ಯಾಮ್ ಕಿಶೋರ್ ಸಿಂಗ್ ಮುಂತಾದವರು ಪರಿಸರ ಸಂರಕ್ಷಣೆ ಮಹತ್ವದ ಕುರಿತು ಮಕ್ಕಳಿಗೆ ವಿವರಿಸಿ ಹೇಳಿದರು.
ಈ ಮೂರು ದಿನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸತ್ಯವಾಣಿಯವರು ಹಾಗೂ ಚಂದ್ರಕಾಂತ್, ವೆಂಕಟೇಶ್ರವರು ಮಕ್ಕಳಿಗೆ ಹಲವು ವಿಷಯಗಳ ಮಹತ್ವ ಕುರಿತು ಜ್ಞಾನ ನೀಡಿ ಸೋದರಿ ನಿವೇದಿತಾ ಪುಸ್ತಕಗಳನ್ನು ವಿತರಿಸಿದರು. ಕೊನೆಯಲ್ಲಿ ಮಕ್ಕಳಿಗೆ ಹೋಳಿಗೆ ಊಟ ಹಾರೈಸಿ ಹಬ್ಬದ ವಾತಾವರಣ ನಿರ್ಮಿಸಲಾಯಿತು
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 