ಬಳ್ಳಾರಿ: ಆದಿವಾಸಿಗಳ ಬರವಣಿಗೆ, ಧ್ವನಿ: ಅಂತರಾಷ್ಟ್ರೀಯ ಸಮ್ಮೇಳನ
ಲೋಕದರ್ಶನ ವರದಿ
ಬಳ್ಳಾರಿ 04: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ದಿ: 3 ಮತ್ತು 4ಜೂನ್ 2019 ರಂದು ಆದಿವಾಸಿಗಳ ಬರವಣಿಗೆ ಮತ್ತು ನಿರ್ಬಂಧಿತ ಧ್ವನಿ ಈ ವಿಷಯದ ಕುರಿತು ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನ ಜರುಗಿತು. ಉದ್ಘಾಟನೆ ಮಾಡಿ ಮಾತನಾಡಿದ ಡಾ. ಸುರಜ್ ಬಡ್ತ್ಯ ನಾಗರಿಕ ಸಮಾಜ ಆದಿವಾಸಿ ಜನರಿಗೆ ಅನ್ಯಾಯ ಮಾಡಿದೆ, ಆದಿವಾಸಿಗಳು ಕೇವಲ ಭೂಮಿ, ನೀರು, ಕಾಡು ಇವುಗಳ ನಡುವೆ ಕಳೆದು ಹೋಗಿದ್ದಾರೆ. ಮೂಲಭೂತ ಹಕ್ಕುಗಳ ಕುರಿತು ಜ್ಞಾನವನ್ನು ಹೊಂದದಿರುವುದೇ ಇದಕ್ಕೆ ಮುಖ್ಯ ಕಾರಣ ಎಂದರು.
ಮುಖ್ಯ ಅಥಿತಿ ಮಾತುಗಳಾನ್ನಾಡಿದ ಪ್ರೊ. ರಮೇಶ್ ಆದಿವಾಸಿಗಳು ಬದುಕನ್ನು ಕಟ್ಟಿಕೊಳ್ಳುವುದು ಇವತ್ತಿನ ಅನಿವಾರ್ಯತೆಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತಾನಾಡಿದ ಕುಲಪತಿ ಎಂ.ಎಸ್. ಸುಭಾಸ್ ಆದಿವಾಸಿ ಜೀವನ ಒಂದು ನಿಗೂಢ ಪ್ರಶ್ನೆಯಾಗಿದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರೊ. ಎನ್. ಶಾಂತನಾಯ್ಕ್ ವಿಚಾರ ಗೋಷ್ಠಿಯ ಮೂಲ ಆಶಯವನ್ನು ಪ್ರಸ್ತುತ ಪಡಿಸುತ್ತಾ ಆದಿವಾಸಿಗಳು ಬದುಕಿರುವ ಬದುಕು ಅವರದಲ್ಲಾ, ಇದು ನಾಗರಿಕ ಸಮಾಜ ಹೇರಿರುವ ಒತ್ತಡ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಮೂಲ ಭಾಷಣ ಮಾಡಿದ ಬಾಬುರಾವ್ ಹರಿಶ್ರೀ, ಭೂತನ್ ರಾಯಲ್ ವಿಶ್ವವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕ ಮಾತನಾಡಿ ಪಾಶ್ಚತ್ತೋತ್ತರ ಭಾರತದಲ್ಲಿ ಆದಿವಾಸಿಗಳು ಎಲ್ಲಾ ಮೂಲ ನೆಲೆಗಳನ್ನು ಕಳೆದುಕೊಂಡು ದಿಕ್ಕಿಲ್ಲದಂತೆ ಆಗಿದ್ದಾರೆ ಎಂದರು.
ಕಾರ್ಯಕ್ರಮವು ರಾಹುಲ್ ನಾಗಪ್ಪ ತಂಡದವರ ಉರುಮಿಯೊಂದಿಗೆ ಆರಂಭವಾಗಿದ್ದು ವಿಶಿಷ್ಟ. ಕಾರ್ಯಕ್ರಮದಲ್ಲಿ ಹೈದರಾಬಾದಿನ ಡಾ.ರಾಜುನಾಯ್ಕ್, ಡಾ.ವಿಜಯ, ಮುತಾಂದ ಅನೇಕ ಸಂಶೋಧಕರು ಹಾಜರಾಗಿದ್ದರು. ಮಾನಸ.ಕೆ ಪ್ರಾರ್ಥನೆ ಮಾಡಿದರು ಫರಾನಾಜ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 