ನಂಬಿಕೆ, ನಿಜ ಭಕ್ತಿಯಲ್ಲಿ ದೇವರಿದ್ದಾನೆ: ಶಿವಲಿಂಗೇಶ್ವರ ಕುಮಾರೇಂದ್ರಶ್ರೀ
ಗೋಕಾಕ 26: 'ನಂಬಿಕೆ, ನಿಜ ಭಕ್ತಿಯಲ್ಲಿ ದೇವರಿದ್ದು, ಅಂತರಂಗದಿಂದ ದೇವರನ್ನು ಸ್ಮರಿಸುವ ಮೂಲಕ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು' ಎಂದು ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಹೇಳಿದರು.
ತಾಲ್ಲೂಕಿನ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಜಾತ್ರೆಯ ಪ್ರವಚನ, ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಸೌರಭವನ್ನು ಮಂಗಳವಾರ ಸಂಜೆ ಉದ್ಘಾಟಿಸಿ ಮಾತನಾಡಿದರು.
ಎಲ್ಲ ಧರ್ಮಶಾಸ್ತ್ರಗಳು ಮನುಕುಲದ ಹಿತವನ್ನು, ಏಳ್ಗೆಯನ್ನು ಬಯಸುತ್ತಿದ್ದು, ಪ್ರತಿ ವ್ಯಕ್ತಿಯು ನಡೆ, ನುಡಿಗಳಲ್ಲಿ ಸದ್ಭಾವ ರೂಢಿಸಿಕೊಂಡು ಬದುಕನ್ನು ಸುಂದರವಾಗಿಸಿಕೊಳ್ಳಬೇಕು ಎಂದರು.
ಬಳೂಟಗಿಯ ಸಿದ್ದೇಶ್ವರ ಶಾಸ್ತ್ರೀಗಳು ಪ್ರವಚನದ ಮೂಲಕ ಮಾನವೀಯ ಮೌಲ್ಯ ಮತ್ತು ಮಾನವ ಧರ್ಮದ ಕುರಿತು ವ್ಯಾಖ್ಯಾನ ಮಾಡಿದರು.
ಕನರ್ಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದ ವೀರೇಶ ಕಿತ್ತೂರ ಅವರ ಗಾಯನ ಮನಸೂರೆಗೊಳಿಸಿತು. ಹನಮಂತ ಕಾಮನಹಳ್ಳಿ ಅವರ ಕೊಳಲು ವಾದನ, ವಿಜಯ ದೊಡ್ಡಣ್ಣವರ ತಬಲಾ ಸಾಥ್ ಸಂಗೀತ ಗೋಷ್ಠಿಗೆ ಮೆರಗು ನೀಡಿತ್ತು. ಕುಮಾರ ಬಡಿಗೇರ, ಶಾಂಭವಿ ಮತ್ತು ಸರಸ್ವತಿ ಸಹೋದರಿಯರ ಗಾಯನ ಎಲ್ಲರ ಮೆಚ್ಚುಗೆ ಗಳಿಸಿತು.
ಉಪನ್ಯಾಸ: ಶಿಕ್ಷಕ ಅಪ್ಪಾಸಾಹೇಬ ಕುರುಬರ ಅವರ 'ತತ್ವಪದಗಳಲ್ಲಿ ಮಾನವೀಯ ಮೌಲ್ಯಗಳು' ಕುರಿತು ಉಪನ್ಯಾಸ ನೀಡಿದರು. ಅತಿಥಿಯಾಗಿ ನಿವೃತ್ತ ಚಿತ್ರಕಲಾವಿದ ಜಿ.ಎ. ಪತ್ತಾರ ಭಾಗವಹಿಸಿದ್ದರು.
ಮಲ್ಲಕಂಬ ಪ್ರದರ್ಶನ: ಸಂಜೆ ಜರುಗಿದ ಹಳ್ಳೂರಿನ ಮಹಾಲಕ್ಷ್ಮೀದೇವಿ ಡೊಳ್ಳು ಕುಣಿತ ಕಲಾ ತಂಡದವರು ಪ್ರದಶರ್ಿಸಿದ ವೈಶಿಷ್ಟ್ಯಪೂರ್ಣವಾದ ಡೊಳ್ಳು ಕುಣಿತವು ಸೇರಿದ ಜನಸಾಗರವನ್ನು ರಂಜಿಸಿತು.
ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು. ಯಶೋಧಾ ಮರಬಸನ್ನವರ, ರೋಹಿಣಿ ಬಂಗಾರಿ ನಿರೂಪಿಸಿದರು.
ಇಂದಿನ ಕಾರ್ಯಕ್ರಮ: ಏ. 27ರಂದು ಸಂಜೆ 7.30ಕ್ಕೆ ದೂರದರ್ಶನದ 'ಮಧುರ, ಮಧುರ ಮಂಜುಳ ಗಾನ' ಕಾರ್ಯಕ್ರಮದ ಖ್ಯಾತಿಯ ವಿಶ್ರಾಂತ ದೂರದರ್ಶನ ಹೆಚ್ಚುವರಿ ಮಹಾನಿದರ್ೇಶಕ ಮಹೇಶ ಜೋಶಿ 'ಧರ್ಮ ಸೌಹಾರ್ದತೆ' ಕುರಿತು ಮಾತನಾಡುವರು. ಡಾ. ಸಿದ್ದಣ್ಣ ಉತ್ನಾಳ ಭಾಗವಹಿಸುವರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 