ಬೆಳಿಗ್ಗೆ ಉದ್ಘಾಟನೆಗೊಂಡ ಸೋಮಯ್ಯ ಕಾರ್ಖಾನೆಗೆ ಬರುತ್ತಿರುವ ಗಾಡಿಗೆ ಸಂಜೆ ಬೆಂಕಿ
A vehicle coming to the Somaiya factory, which was inaugurated in the morning, caught fire in the e
ಮಹಾಲಿಂಗಪುರ 13: ಬೆಳಿಗ್ಗೆ ತಾನೆ ಪೂಜೆ ಮಾಡಿ ಪ್ರಾರಂಭಿಸಿದ ಸೋಮಯ್ಯ ಸಕ್ಕರೆ ಕಾರ್ಖಾನೆಗೆ ಸಂಜೆ 4 ಗಂ.ವೇಳೆ ಏಕಾಏಕಿ ಮುಧೋಳ ಭಾಗದ ರೈತರು ಬಂದು ಅಲ್ಲಿರುವ ಟ್ರ್ಯಾಕ್ಟರಗಳನ್ನು ಕೆಡವಿ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಒಟ್ಟು 20 ಕ್ಕಿಂತ ಹೆಚ್ಚು ಕಬ್ಬು ತುಂಬಿದ ಟ್ರ್ಯಾಕ್ಟರಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯೆಕ್ತಪಡಿಸಿದ ರೈತರು.
ಮುಧೋಳದ ಸುಮಾರು ಸಾವೀರಾರು ರೈತರು ಬಸ್ ತುಂಬಿಕೊಂಡು ಸಮೀರವಾಡಿಗೆ ಬಂದು ಅಲ್ಲಿ ರಸ್ತೆ ಮುಖಾಂತರ ಸೋಮಯ್ಯ ಕಾರ್ಖಾನೆಗೆ ತೆರಳುತ್ತಿದ್ದ ಟ್ರ್ಯಾಕ್ಟರಗಳನ್ನು ಉರುಳಿಸಿ ಪೇಟ್ರೋಲ್ ಸುರಿದು ಬೆಂಕಿ ಹಚ್ಚಿ ಕೂಗಾಡ ತೊಡಗಿದರು.ಅಲ್ಲಿಗೆ ಬಂದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಅಲ್ಲದೆ ಸೋಮಯ್ಯ ಸಕ್ಕರೆ ಕಾರ್ಖಾನೆಯ ಮುಂದಿನ ದೊಡ್ಡದಾದ ಗೇಟ ಮುಚ್ಚಿ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಪ್ರತಿಭಟನೆಯಲ್ಲಿ ಸಾಕಷ್ಟು ರೈತರಿಗೂ ಸಹ ಗಾಯಗಾಳಾಗಿವೆ, ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.ಸರ್ಕಾರಿ ಕಾರ್ಖಾನೆ ಆವರಣವೆಲ್ಲ ಉದ್ವಿಘ್ನ ವಾತಾವರಣದಿಂದ ತುಂಬಿ ಸಾರ್ವಜನಿಕರು ಹೊರಗೆ ಬರದಹಾಗೆ ಭಯದ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಧಾವಿಸಿದ ಎಸ್.ಪಿ ಮತ್ತು ಪೊಲೀಸ ಇಲಾಖೆ ಹಾಗೂ ಅಧಿಕಾರಿಗಳು, ಮತ್ತು ಅಗ್ನಿ ಶಾಮಕ ದಳ, ಅಂಬುಲೇನ್ಸಗಳು ಆಗಮಿಸಿ ಸೂಕ್ತ ಭದ್ರತೆ ನೀಡಲು ಪರದಾಡಬೇಕಾಯಿತು.
ರೈತರ ಬೇಡಿಕೆ: ಯಾವುದೇ ಕಾರಣಕ್ಕೂ ನಾವು ಸರ್ಕಾರ ಹೇಳಿದ ರೇಟ್ಗೆ ಒಪ್ಪುವುದಿಲ್ಲ. ನಮಗೆ ನ್ಯಾಯಯುತವಾದ 3500 ರೂಗಳೆ ಬೇಕು ಇದಕ್ಕೆ ಒಪ್ಪಿದರೆ ಮಾತ್ರ ಕಾರ್ಖಾನೆ ತೆಗೆಯಬೇಕು, ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಕಾರ್ಖಾನೆ ತೆಗೆಯಲು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 