ಅರ್ಥಪೂರ್ಣವಾಗಿ ಎಳ್ಳ ಅಮಾವಾಸಿ ಆಚರಣೆ
A meaningful New Moon celebration
ಇಂಡಿ 19: ನಗರ ಹಾಗೂ ತಾಲೂಕಿನಾದ್ಯಂತ ಎಳ್ಳ ಅಮಾವಾಸ್ಯೆಯನ್ನು ಸಾರ್ವಜನಿಕರು ಅತೀ ವಿಜೃಂಭಣೆಯಿಂದ ಆಚರಿಸಿದರು. ಸಾರ್ವಜನಿಕರು ತಮ್ಮ-ತಮ್ಮ ಜಮೀನುಗಳಿಗೆ ಹೋಗಿ “ಚರಗಾ” ಚಲ್ಲಿ ಛಜ್ಜಿ ರೊಟ್ಟಿ ಚವಳಿಕಾಯಿ ಚೋಂಗೆಬಲೋ ಎಂಬ ಉದ್ಘಾರ ಮಾಡಿ, ಕುಟುಂಬಸ್ಥರು, ಗೆಳೆಯರು, ಸಂಭಂದಿಕರೊಂದಿಗೆ ವಿವಿಧ ಬಗೆಯಾಗಿ ತಯಾರಿಸಿದ ಬೋಜನವನ್ನು ತಮ್ಮ ಜಮೀನಿನಲ್ಲಿಯೇ ಕುಳಿತು ಸವಿದರು.ಕಾಸುಗೌಡ ಬಿರಾದಾರ ಅವರ ಜಮೀನಿನಲ್ಲಿ ನೂರಾರು ಜನ ಚರಗಾ ಚಲ್ಲಿ ಭೋಜನ ಸವಿದರು.ಖೇಡಗಿ ಗ್ರಾಮದ ಪಾಟೀಲ್ ಅವರ ಜಮೀನಿನಲ್ಲಿ ವಿದ್ಯಾಶ್ರೀ ಪಾಟೀಲ, ಉಮಾ ಪಟ್ಟದಕಲ್, ಪ್ರಿಯಾಂಕಾ ಅಂಬರಕರ, ರಾಜಶ್ರೀ ಕ್ಷತ್ರಿ, ಭಾರತಿ ಪತ್ರಿಮಠ ಶ್ಯಾಮಲಾ ಬಗಲಿ, ಶಶಿಕಲಾ ಉಮರ್ಜಿ, ರಾಜಶ್ರೀ ಭಜಂತ್ರಿ, ಪ್ರೀತಿ ಕ್ಷತ್ರಿ, ಸುಜಾತಾ ಬಡಿಗೇರ ಮತ್ತಿತರರು ಎಳ್ಳ ಅಮಾವಾಸ್ಯೆಯ ಪ್ರಯುಕ್ತ ಚರಗಾ ಚಲ್ಲಿ ಸಂಭ್ರಮದಿಂದ ಎಳ್ಳ ಅಮಾವಾಸ್ಯ ಆಚರಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 