ಅಥಣಿ ನ್ಯಾಯವಾದಿ ಸಂಘದ ಅಧ್ಯಕ್ಷರಾಗಿ ಎ.ಎ. ಹುದ್ದಾರ, ಉಪಾಧ್ಯಕ್ಷರಾಗಿ ಆರಿ್ಪ. ಹಗೇದ ಆಯ್ಕೆ
A.A. Huddara elected as President of Athani Bar Association, A.R.P. Hageda elected as Vice Presiden
ಅಥಣಿ ನ್ಯಾಯವಾದಿ ಸಂಘದ ಅಧ್ಯಕ್ಷರಾಗಿ ಎ.ಎ. ಹುದ್ದಾರ, ಉಪಾಧ್ಯಕ್ಷರಾಗಿ ಆರಿ್ಪ. ಹಗೇದ ಆಯ್ಕೆ
ಅಥಣಿ 30: ವಕೀಲರ ಅಧ್ಯಕ್ಷರಾಗಿ ನ್ಯಾಯವಾದಿ ಎ.ಎ.ಹುದ್ದಾರ , ಉಪಾಧ್ಯಕ್ಷರಾಗಿ ಆರಿ್ಪ. ಹಗೇದ, ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ಸಿ.ಕೆ.ಬಾಗಿ, ಖಜಾಂಚಿಯಾಗಿ ಜಿ.ಡಿ.ಹಿರೇಮಠ, ಕಾರ್ಯದರ್ಶಿಯಾಗಿ ಎನ್.ಪಿ.ಬಾಬರ ಚುನಾವಣೆಯಲ್ಲಿ ಮತ್ತು ಪ್ರಹಿಳಾ ಪ್ರತಿನಿಧಿಯಾಗಿ ನ್ಯಾಯವಾದಿ ಗೀತಾ ಕಾಂಬಳೆ ಅವಿರೋಧವಾಗಿ ಎಂದು ಚುನಾವಣಾಧಿಕಾರಿ ಬಿ.ಎಸ್.ಅಂಬಿ ಘೋಶಿಸಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾದ ನ್ಯಾಯವಾದಿ ಎ.ಎ.ಹುದ್ದಾರ ಮಾತನಾಡಿ, ಈಗಾಗಲೇ ಮಂಜುರಾದ 36 ಕೋಟಿ ರೂ. ಮೊತ್ತದ ನ್ಯಾಯಾಲಯ ಸಂಕೀರ್ಣ ಕಾಮಗಾರಿ ಪ್ರಾರಂಭಿಸುವ ನಿಟ್ಟಿನಲ್ಲಿ ನಾನು ಇಪ್ಪತ್ತನಾಲ್ಕು ಗಂಟೆ ಕಾರ್ಯನಿರ್ವಹಿಸುವುದಾಗಿ ಹೇಳಿದರು. ನ್ಯಾಯವಾದಿ ಸಂಘದ ಹಿಂದಿನ ಅಧ್ಯಕ್ಷರುಗಳು ಸಾಕಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ನಾನೂ ಕೂಡ ಅವರಂತೆಯೇ ಸಂಘದ ಬೆಳವಣಿಗೆಗಾಗಿ ಕಾರ್ಯನಿರ್ವಹಿಸುವೆ ಎಂದರು.
ಚುನಾವಣೆಯಲ್ಲಿ ನನ್ನ ಗೆಲುವಿಗೆ ಸಹಕಾರ ನೀಡಿದ ಹಿರಿಯ, ಕಿರಿಯ ವಕೀಲ ಬಂಧುಗಳನ್ನು ಅಭಿನಂದಿಸಿದರು. ಉಪಾಧ್ಯಕ್ಷರಾಗಿ ಆಯ್ಕೆಯಾದ ನ್ಯಾಯವಾದಿ ಆರಿ್ಪ.ಹಗೇದ ಮಾತನಾಡಿ, ನನ್ನನ್ನು ಆಯ್ಕೆ ಮಾಡಿದ ನನ್ನ ಸಹೋದ್ಯೋಗಿಗಳಿಗೆ ಚಿರ ಋಣಿ ಎಂದ ಅವರು ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವೆ ಎಂದರು. ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ ಹಿರಿಯ ನ್ಯಾಯವಾದಿ ಎಸ್.ಎ.ಪಾಟೀಲ(ಹುಲಗಬಾಳ) ಮಾತನಾಡಿದರು. ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಕೆ.ಎ.ವಣಜೋಳ, ನಿಂಗಪ್ಪ ಖೋಕಲೆ, ಎಸ್.ಎ.ಪಾಟೀಲ, ಬಸವರಾಜ ಢಂಗಿ, ಸುನೀಲ ಸಂಕ, ಧರೆಪ್ಪ ಠಕ್ಕಣ್ಣವರ, ಬಸವರಾಜ ಅಂಬಿ, ಎಮ್.ಡಿ.ಗುಂಜಿಗಾಂವಿ ಸೇರಿದಂತೆ ನೂರಾರು ವಕೀಲರು ಎ.ಎ.ಹುದ್ದಾರ ಗೆಲುವಿಗೆ ಸಂಭ್ರಮಿಸಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 