ಹಿರಿಯ ಪತ್ರಕರ್ತ ನೌಶಾದ್ ಬಿಜಾಪುರೆ ಅವರಿಗೆ ‘ಲೋಕದರ್ಶನ’ ಪ್ರಶಸ್ತಿ

ಹಿರಿಯ ಪತ್ರಕರ್ತ ನೌಶಾದ್ ಬಿಜಾಪುರೆ ಅವರಿಗೆ ‘ಲೋಕದರ್ಶನ’ ಪ್ರಶಸ್ತಿ 'Lokadarshana' Award for Senior Journalist Naushad Bijapure

ಬೆಳಗಾವಿ 21: ಹಿರಿಯ ಪತ್ರಕರ್ತ ಹಾಗೂ ಇಂಡಿಯನ್ ಎಕ್ಸ್‌ಪ್ರೆಸ್ ಅಸೋಸಿಯೇಟ್ ಎಡಿಟರ್ ನೌಶಾದ್ ಬಿಜಾಪುರೆ ಅವರನ್ನು ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ‘ಲೋಕದರ್ಶನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಲೋಕದರ್ಶನ ದಿನಪತ್ರಿಕೆಯ ಸಂಸ್ಥಾಪಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿವಂಗತ ಎಂ.ಬಿ. ದೇಸಾಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ವಾರ್ಷಿಕ ‘ಲೋಕದರ್ಶನ’ ಪ್ರಶಸ್ತಿಯನ್ನು ನೌಶಾದ್ ಬಿಜಾಪುರೆ ಅವರಿಗೆ ಪ್ರದಾನ ಮಾಡಲಾಯಿತು.

ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಹಾಗೂ ಜಯಲಕ್ಷ್ಮಿ ಶರದಚಂದ್ರ ದೇಸಾಯಿ ಅವರು ಬಿಜಾಪುರೆ ಅವರನ್ನು ಸತ್ಕರಿಸಿದರು.

ಕಾರ್ಯಕ್ರಮದಲ್ಲಿ ಶ್ರೀಶೈಲ ಮಠದ, ಮಂಜುನಾಥ ಪ್ಯಾಟಿ, ಅಪ್ಪಣ್ಣ ಮೇತ್ರಿ, ಸಾಗರ್ ಚೌಗಲೆ, ಧನಂಜಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.