ರಾಣೇಬೆನ್ನೂರು 18: ಆರೋಗ್ಯ ರಕ್ಷಣೆಗೆ ಯೋಗ ಧ್ಯಾನ ಪ್ರಾಣಾಯಾಮ ಇಂದಿನ ಅಗತ್ಯವಾಗಿದ್ದು ಆಯುಷ್ ಇಲಾಖೆಯು ಈ ನಿಟ್ಟಿನಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವುದಾಗಿ ಆಯುಷ್ ಇಲಾಖೆಯ ಡಾ: ಜಿ.ಸಿ. ನಿಡಗುಂದಿ ಹೇಳಿದರು.
ನಗರ ಹೊರ ವಲಯದ ಆರಿ್ಟ. ಎಸ್. ಕಾಲೇಜು ಕಲಾ ಮತ್ತು ವಿಜ್ಞಾನ ವಿದ್ಯಾಲಯ ಆವರಣದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಆಯೋಜಿಸಿದ್ದ, "ಹರಿತ್" ಯೋಗ ಶ್ರಮ ಧಾನ ಮತ್ತು ಯೋಗಾಭ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ. ಸಂಜಯ್ ಸಾಹುಕಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ಆಯುಷ್ ಇಲಾಖೆಯ ಯೋಗ ತರಬೇತುದಾರರಾದ ಜ್ಯೋತಿ ಜೆ.ಜಂಬಿಗಿ ಅವರು ಮಾತನಾಡಿ, ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಲು ನಿತ್ಯ ಯೋಗ, ಧ್ಯಾನ, ಪ್ರಾಣಯಾಮ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕರು, ಯಾವುದೇ ಜಾತಿ ಮತ ವಯಸ್ಸಿನ ಭೇದವಿಲ್ಲದೆ, ನಿತ್ಯ ಬದುಕಿನಲ್ಲಿ ಕ್ಷಣ ಕಾಲ ಯೋಗ ಅಳವಡಿಸಿಕೊಂಡರೆ, ಜೀವನ ಪರ್ಯಂತ ಆರೋಗ್ಯ ಜೀವನ ಸಾಗಿಸಬಹುದಾಗಿದೆ ಎಂದು ಕರೆ ನೀಡಿದರು. ಕಾಲೇಜು ಪ್ರಾಚಾರ್ಯ . ಸಿ. ಎ. ಹರಿಹರ, ಎನ್. ಎಸ್. ಎಸ್ ಕಾರ್ಯಕ್ರಮಾಧಿಕಾರಿ ಡಾ. ಸರಸ್ವತಿ ಬೊಮ್ಮನಾಳ, ಡಾ. ಮನೋಜಕುಮಾರ ಸವಣೂರ,ಡಾ. ಬಾಬಾ ಸಾಹೇಬ ಜಂಗಳಪ್ಪನವರ, ಜಿಲ್ಲಾ ಆಯುಷ್ ಅಧೀಕ್ಷಕ ಪ್ರಸನ್ನ ಕುಮಾರ, ಡಾ. ಎಸ್.ಎ. ಪಾಟಿಲ, ಎಸ್. ಎ. ಹೇಡಿಯಾಲ, ಸುರೇಶ ಕರಬಸಪ್ಪ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.