ವಿಶ್ವ ಕಂಡ ದೀಮಂತ ನಾಯಕ : ಪ್ರಧಾನಿ

ಲೋಕದರ್ಶನ ವರದಿ 

ಕನಕಗಿರಿ 18: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತ ದೇಶಕ್ಕೆ ಮಾತ್ರ ಸೀಮಿತವಾಗದೇ ವಿಶ್ವಕ್ಕೆ ಮಾದರಿಯ ದೀಮಂತ ನಾಯಕನಾಗಿ  ಹೊರಹೊಮ್ಮಿದ್ದಾರೆ ಎಂದು ಕನಕಗಿರಿ ವಿಧಾನ ಸಭಾ ಕ್ಷೇತ್ರದ ಆಕಾಂಕ್ಷಿ ಪಿ.ವಿ.ರಾಜಗೋಪಾಲ ಹೇಳಿದರು. 

ಅವರು ಪಟ್ಟಣದಲ್ಲಿ ಯುವ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬ ಕಾರ್ಯಕ್ರಮದ ನಿಮಿತ್ಯ ಭಾನುವಾರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು, ಬ್ರೇಡ್ ವಿತರಣೆ ಮಾಡಿ ಮಾತನಾಡಿದರು. ದೇಶವು ಆರ್ಥಿಕತೆ, ಶೈಕ್ಷಣಿಕ, ಸಾಮಾಜಿಕವಾಗಿ ಸಾಕಾಷ್ಟು ವೇಗವಾಗಿ ಬೆಳೆಯುತ್ತಿದ್ದು, ದೇಶದ ಜನತೆಗಾಗಿ ಸಾಕಷ್ಟು ರೈತ ಪರ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಕನಕಗಿರಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ಕನಕಗಿರಿ ವಿಧಾನ ಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದೇನೆ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶರಣಪ್ಪ ಪಲ್ಲವಿ, ವೀರೇಶ ಮಿಡ್ಲಕೋಡ್, ಶರಣಪ್ಪ ಸಜ್ಜನ್, ಮಲ್ಕೇಶ್ ಕೋಟೆ, ಶೇಖರ​‍್ಪ ಬಳಿಗಾರ ಸೇರಿದಂತೆ ಇತರರು ಇದ್ದರು.