ಮತದಾನ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಚವಲಾರ

ರಾಮದುರ್ಗ 15: ಚುನಾವಣೆಯಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ತಪ್ಪದೇ ಮತದಾನ ಮಾಡಲು ಮುಂದೆ ಬರಬೇಕು ಎಂದು ತಹಶೀಲ್ದಾರ ಸುರೇಶ ಚವಲಾರ ಹೇಳಿದರು.  

ತಾಲೂಕ ಸ್ವೀಪ್ ಸಮತಿಯಿಂದಾ ತಾಲೂಕ ಪಂಚಾಯತ ಆವರಣದಲ್ಲಿ ವಿಶೇಷ ಚೇತನರ ಬೈಕ್ ರಾ​‍್ಯಲಿಗೆ ಚಾಲನೆ ನೀಡಿ ಮಾತನಾಡಿದ ಅವರು ಹೆಚ್ಚು ಮತದಾನ ಮಾಡುವದರಿಂದಾ ಉತ್ತಮ ಆಡಳಿತ ನೀರೀಕ್ಷಿಸಬಹುದು  ಎಂದು ನಡಿದರು. ನೂರಾರು ವಿಶೇಷ ಚೇತನರು ತಮ್ಮ ಬೈಕ್‌ನೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಘೋಷಣೆ ಕೂಗುತ್ತಾ ಮತದಾನದ ಜಾಗೃತಿಯನ್ನು ಸಾರ್ವಜರಿಕರಲ್ಲಿ ಮೂಡಿಸಿದರು.  

 ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಸವಾಜ ಐನಾಪೂರ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ಗುಡದಾರಿ, ಎಸಿಡಿಪಿಓ ಆರ್ ಮಂಜುಳಾ. ತಾಲೂಕ ಪಂಚಾಯತ ಹಾಗೂ ಪುರಸಭೆ ಸಿಬ್ಬಂದಿ ರಾ​‍್ಯಲಿಯಲ್ಲಿ ಭಾಗವಹಿಸಿದ್ದರು.