ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ದೃಷ್ಟಿಕೋನ ಮತ್ತು ಸಂವೇದನಾಶೀಲತಾ ಪುನಶ್ಚೇತನ ಕಾರ್ಯಕ್ರಮ

Vision and sensitization revitalization program of the new National Education Policy

ಧಾರವಾಡ 18: ಜ್ಞಾನ ಆಧಾರಿತ ಸಮಾಜವನ್ನು ನಿರ್ಮಿಸಲು ಮತ್ತು ಎಲ್ಲಾ ಸಮುದಾಯದ ಜನರಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದೇ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶವಾಗಿದೆ ಎಂದು ನವದೆಹಲಿಯ ಕೌನ್ಸಿಲ್ ಫಾರ್ ಸೋಶಿಯಲ್ ಡೆವಲೆಪಮೆಂಟ್ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಜಂಧ್ಯಾಲ ಬಿಜಿ.ತಿಲಕ್ ಅಭಿಪ್ರಾಯಪಟ್ಟರು. 

ಅವರು ಕರ್ನಾಟಕ ವಿಶ್ವವಿದ್ಯಾಲಯದ ಮಾಳವಿಯಾ ಮಿಷನ್ ಟೀಚರ್ಸ್‌ ಟ್ರೇನಿಂಗ್ ಸೆಂಟರ್ ಆಯೋಜಿಸಿದ ಎಂಟು ದಿನಗಳ 'ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ದೃಷ್ಟಿಕೋನ ಮತ್ತು ಸಂವೇದನಾಶೀಲತಾ', ಎಂಬ ಆನ್ ಲೈನ್ 

ಪುನಶ್ಚೇತನ  ಕಾರ್ಯಕ್ರಮದಲ್ಲಿ  ಶಿಕ್ಷಣ ನೀತಿಯ ಉಗಮ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.  

ವಿಶ್ವದರ್ಜೆಯ ಶಿಕ್ಷಣ ನೀಡುವುದು ಹೊಸ ಶಿಕ್ಷಣ ನೀತಿಯ ಗುರಿಯಾಗಿದ್ದು, ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸುವದು, ಕೌಶಲ್ಯಯುತ ಶಿಕ್ಷಣಕ್ಕೆ ಆದ್ಯತೆ ನೀಡುವುದು. ಪ್ರಸ್ತುತ ಶಿಕ್ಷಣವನ್ನು ಸಮೂಹ ಗೊಳಿಸುವದು ಅಗತ್ಯವಾಗಿದೆ ಎಂದು ಅವರು ಇಂದು ಮಾಹಿತಿ ತಂತ್ರಜ್ಞಾನ ಶಿಕ್ಷಣದಲ್ಲಿ ಅಗಾಧವಾಗಿ ಪ್ರಾತ್ರ ವಹಿಸಿದೆ ಎಂದರು.  

1944 ದಿಂದ 2020ರ ವರಗೆ ಹಲವಾರು ಶಿಕ್ಷಣ ನೀತಿಗಳು ತಮ್ಮದೇ ಆದ ಉದ್ದೇಶವನ್ನು ಇಟ್ಟುಕೊಂಡು ಅನುಷ್ಠಾನ ಗೊಂಡವು ಅದರಲ್ಲಿ ಪ್ರಮುಖವಾಗಿ ರಾಷ್ಟ್ರೀಯ ಜ್ಞಾನ ಆಯೋಗವು ಉನ್ನತ ಶಿಕ್ಷಣದಲ್ಲಿ ಸುಧಾರಣೆಗಳನ್ನು ತರುವಲ್ಲಿ ಪ್ರಮುಖವಾದ ಪಾತ್ರ ವಹಿಸಿದೆ ಎಂದ ಅವರು 1986ರಲ್ಲಿ ಉದ್ಯಮ ಆಧಾರಿತ ಶಿಕ್ಷಣ ನೀಡಲು ಹೆಚ್ಚು ಒತ್ತು ನೀಡಲಾಯಿತು 2009ರಲ್ಲಿ ಶಿಕ್ಷಣದ ಹಕ್ಕನ್ನು ಜಾರಿಗೆ ತರಲಾಯಿತು ಇದರ ಅನ್ವಯ ಶಿಕ್ಷಣ ಪಡೆಯುವದು ಎಲ್ಲರ ಮೂಲಭೂತ ಹಕ್ಕಿ ಎಂದು ಅನುಮೋದಿಸಲಾಯಿತು. ಪ್ರಸ್ತುತ ಹೊಸ ಶಿಕ್ಷಣ ನೀತಿಯು ವಿದ್ಯಾರ್ಥಿ ಕೇಂದ್ರಿತ ಶಿಕ್ಷಣವನ್ನು ನೀಡುವುದಾಗಿದೆ ಎಂದ ಅವರು ಇಂದು ಶಿಕ್ಷಣದಲ್ಲಿ ಹೆಚ್ಚು ಅಭಿವೃದ್ಧಿಯಾಗಿದ್ದು, ಶಿಕ್ಷಣವು ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ ಎಂದರು. 

ಇಂದಿಗೂ ಕೂಡ  ಪ್ರಾಥಮಿಕ, ಪದವಿ ಮತ್ತು ಉನ್ನತ ಶಿಕ್ಷಣ ಪಡೆಯುವವರರು ಶಿಕ್ಷಣವನ್ನು ಮೊಟಕುಗೊಳಿಸುವವರ ಸಂಖ್ಯೆ ಹೆಚ್ಚಾಗಿದೆ, ತಾಂತ್ರಿಕ ವೃತ್ತಿಪರ ಕೋರ್ಸಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ ಶಿಕ್ಷಣದಲ್ಲಿ ಪ್ರಾದೇಶಿಕತೆ ಅಸಮಾನತೆ ಇದೆ. ಶಾಲಾ ಶಿಕ್ಷಣದಲ್ಲಿ ಕೂಡ ಅನೇಕ ಸಮಸ್ಯೆಗಳಿದ್ದು ಅವುಗಳನ್ನು ಪರಿಹರಿಸಬೇಕಾದ ಅಗತ್ಯವಿದೆ ಎಂದ ಅವರು 

ಶಿಕ್ಷಣದಲ್ಲಿ ಗುಣಮಟ್ಟ ಕಡಿಮೆ ಆಗುತ್ತಿರುವದು ಕಳವಳಕಾರಿ ಸಂಗತಿಯಾಗಿದೆ ಎಂದ ಅವರು ಉನ್ನತ ಶಿಕ್ಷಣದಲ್ಲಿ ಸಮಗ್ರತೆ ತರುವ ಅವಶ್ಯಕತೆ ಇದೆ. ಉತ್ತಮ ಗುಣಮಟ್ಟದ ವಿಶ್ವ ದರ್ಜೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು ಅಗತ್ಯವಾಗಿದೆ ಎಂದರು.  

ಕಾರ್ಯಕ್ರಮದಲ್ಲಿ ಮಾಳವೀಯಾ ಮಿಷನ್ ಟೀಚರ್ಸ್‌ ಟ್ರೇನಿಂಗ್ ಸೆಂಟರನ ನಿರ್ದೇಶಕರಾದ ಪ್ರೊ.ಬಿ.ಹೆಚ್‌. ನಾಗೂರ,ಡಾ.ಭಾರತಿ ಗಾಣಿಗೇರ ಡಾ.ಶಿಲ್ಪಾ ರಾಮನಗೋಳ ಸೇರಿದಂತೆ ಆನ್ ಲೈನ್ ವೇದಿಕೆಯಲ್ಲಿ ಪ್ರಾಧ್ಯಾಪಕರು ಸಂಶೋಧಕರು ಇದ್ದರು.