ನೇಹಾ ಆತ್ಮಕ್ಕೆ ಶಾಂತಿ ಕೋರಿ ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ

ಬೈಲಹೊಂಗಲ 21: ಹುಬ್ಬಳ್ಳಿ ಬಿ.ವಿ.ಬಿ. ಕಾಲೇಜಿನ ಆವರಣದಲ್ಲಿ ಕೊಲೆಯಾದ ನೇಹಾ ಹಿರೇಮಠ ಅವಳ ಆತ್ಮಕ್ಕೆ ಶಾಂತಿ ಸಿಗಲಿ, ಆರೋಪಿತನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಪಟ್ಟಣದ ಸೂರಜ ಮತ್ತಿಕೊಪ್ಪ ಗೆಳೆಯರ ಬಳಗದಿಂದ ಕಿತ್ತೂರು ಚೆನ್ನಮ್ಮ ಸಮಾಧಿ ಹತ್ತಿರ  ಮೇಣದ ಬತ್ತಿ ಹಚ್ಚಿ ಶಾಂತಿ ಕೋರಿದರು. 

ಯುವ  ಮುಖಂಡ ಸೂರಜ ಮತ್ತಿಕೊಪ್ಪ ಮಾತನಾಡಿ, ಇಂತಹ ಕ್ರೂರ ಘಟಣೆ ಮರುಕಳಿಸದಂತೆ ಆರೋಪಿಗೆ ಹಾಗೂ ಆತನಿಗೆ ಸಾಥ ನೀಡಿದವರಿಗೆ ಕಠಿಣ ಶಿಕ್ಷೆಯಾಗಬೇಕು. ದೇಶದಲ್ಲಿ ಶಾಂತಿ ಕದಡುವ ಕೆಲಸ ಮರುಕಳಿಸದಂತೆ ಸರಕಾರ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದರು. 

 ಅರ್ಜುನ ಕಲಕುಟಕರ, ಶೋಯೆಬ ಸಂಗೊಳ್ಳಿ, ಮಂಜುನಾಥಬಡಿಗೇರ, ಆಸೀಫ್  ಅತ್ತಾರ,ಆಶಪಾಕ ಪಡೆಸೂರ, ಸಂತೋಷ ಬಡಸದ, ಮೊಹಮ್ಮದ ಕೊತ್ವಾಲ, ಸುಭಾನಿ ಹವಾಲ್ದಾರ, ರೋಹಿತ ಚಡಿಚಾಳ, ನಾಗರಾಜ ಹುಲಮನಿ, ಮೊಹಮ್ಮದ ಅನ್ಸಾರಿ, ತೌಫಿಕ ಹೊಂಗಲ, ಸರಫರಾಜ ಕಿತ್ತೂರು ಅನೇಕರು ಇದ್ದರು.